- ಭಗವತ್ ನಗರದ ಉದ್ಯಾನವನದಲ್ಲಿ ಸಸಿ ನೆಟ್ಟು ಆಚರಣೆ
ಕನ್ನಡಪ್ರಭ ವಾರ್ತೆ ಬೀರೂರುಪರಿಸರ ಎಂದರೆ ಜನಜೀವನ, ಕೃಷಿ, ಪ್ರಾಣಿ ಸಂಕುಲ, ಎಲ್ಲವೂ ಒಂದಕೊಂದು ಕೊಂಡಿಯಂತೆ ಬೆಸೆದುಕೊಂಡಿದೆ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧುಬಾವಿಮನೆ ತಿಳಿಸಿದರು.ಪುರಸಭೆ ಭಗವತ್ ನಗರದ ಪಾರ್ಕಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರದಲ್ಲಿ ಇಂತಹ ಒಂದು ಕೊಂಡಿ ಹದಗೆಟ್ಟರು ಎಲ್ಲವೂ ಹಾಳಾಗುತ್ತದೆ.ಇಂತಹ ವಿಷಯ ಗಳನ್ನು ನಾವು ವಿವೇಚನೆಯಿಂದ ಅರ್ಥಮಾಡಿಕೊಂಡು ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡರೆ ಕೃಷಿಯೂ ಸೇರಿದಂತೆ ಎಲ್ಲವೂ ಸುವ್ಯವಸ್ಥಿತ ಕೊಂಡಿಯಂತೆ ಪರಸ್ಪರ ಬೆಸೆದು ಕೊಂಡಿರುತ್ತವೆ ಎಂಬುದನ್ನು ಮರೆಯಬಾರದು ಎಂದು ನೆನಪಿಸಿದರು.
ಹಸಿರೆ - ಉಸಿರು ಪರಿಸರ ಉಳಿಸುವುದು ನಾಗರಿಕರ ಜವಾಬ್ದಾರಿಯಾಗಿದ್ದು ಪರಿಸರವನ್ನು ಮಕ್ಕಳಂತೆ ರಕ್ಷಿಸುವ ಸ್ಥಿತಿ ಇದೆ, ಪಟ್ಟಣ ಬೆಳೆದಂತೆಲ್ಲಾ ಕಾಂಕ್ರೀಟ್ ಕಾಡು ಬೆಳೆಯುತ್ತಿದೆ. ಪರಿಸರ ರಕ್ಷಿಸುವ ಸಲುವಾಗಿ ಸಾಲುಮರದ ತಿಮ್ಮಕ್ಕ ನಮಗೆ ಪ್ರೇರಣೆ ಯಾಗಬೇಕು ಎಂದರು.ಸ್ವಾರ್ಥ ಪರ ಉದ್ದೇಶಗಳಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವ ಪರಿಣಾಮ ಸಾಮಾನ್ಯ ಜನರ ಬದುಕಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ. ಶುದ್ದ ಗಾಳಿ ಪಡೆಯಲಾಗದೆ ಹಲವು ಕಾಯಿಲೆಗಳಿಗೆ ತುತ್ತಾಗುವ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂದರು.ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ, ಅರಣ್ಯವನ್ನು ಕಡಿದು ಹಾಕಿದ್ದರಿಂದ ಜಾಗತಿಕ ತಾಪಮಾನ ಏರಿಕೆಯಾಗಿ ಈ ನಮ್ಮ ಭೂಮಿ ಮರು ಚೇತರಿಕೆಗೆ ಎಡೆಯಿಲ್ಲದೆ ಅವನತಿಯೆಡೆಗೆ ಪಯಣ ಬೆಳೆಸಿದೆ. ತಾಪಮಾನ ಏರಿಕೆ ಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗಷ್ಟೆ ಅಲ್ಲದೆ ಇದೀಗ ಕೈಗೆತ್ತಿಕೊಳ್ಳುತ್ತಿರುವ ಹಲವಾರು ಅಭಿವೃದ್ಧಿ ಯೋಜನೆಗಳು ವಿಫಲವಾಗುವ ಆಂತಕವಿದೆ ಎಂದರು.ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಪರಿಸರ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಇದ್ದಕ್ಕೆ ಸಹಕರಿಸಬೇಕು. ಒಂದು ಎಕರೆ ಪ್ರದೇಶದಲ್ಲಿರುವ ಮರಗಳು ಪ್ರತಿ ವರ್ಷ 18 ಜನರಿಗಾಗುವಷ್ಟು ಆಮ್ಲಜನಕ ಉತ್ಪಾದಿಸುತ್ತವೆ ಅದನ್ನ ಮರೆಯಬಾರದು. ಉಸಿರಾಡಲು ಅನುಕೂಲವಾಗುವ ಈ ಆಮ್ಲಜನಕ ನೀಡುವ ಗಿಡ ಮರಗಳನ್ನು ನಗರಿಕರಣದ ನೆಪದಲ್ಲಿ ಕಾಡುಗಳನ್ನು ಕಡಿದು ಹಾಕಲಾಗುತ್ತದೆ. ಇದರಿಂದ ಕಾಡಿನಲ್ಲಿ ವಾಸವಿರುವ ಪ್ರಾಣಿಗಳು ಜಾಗವಿಲ್ಲದೇ ನಗರ ಪ್ರದೇಶಗಳಿಗೆ ಬರುವಂತಾಗಿದೆ ಎಂದರು.ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ ಮಾತನಾಡಿ, ಹಿಂದಿನ ದಿನಗಳಲ್ಲಿ ಪ್ರಕೃತಿಗೆ ದೈವತ್ವ ಸ್ಥಾನವನ್ನು ಖುಷಿಮುನಿಗಳು ನೀಡಿದ್ದಾರೆ ಆದರಿಂದ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಕಾಳಜಿಯನ್ನು ಮಕ್ಕಳಿಗೆ ತೋರಿಸ ಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಣೆಗೂ ಮುಂದಾಗಬೇಕು ಎಂದರು.ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಪ್ರಕಾಶ್ ಮಾತನಾಡಿದರು. ಪುರಸಭೆ ಅಭಿಯಂತರೆ ವೀಣಾ, ಡೇನಲ್ಮ ಸಂಯೋಜಕಿ ಲಕ್ಷ್ಮಿದೇವಿ, ಭಗವತ್ ನಗರ ಸ್ವಸಹಾಯ ಸಂಘದ ಅಧ್ಯಕ್ಷೆ ನಾಗರತ್ನ, ಕರಿಯಪ್ಪ, ಲೋಕೇಶ್ ಹಾಗೂ ವಿವಿಧ ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.5ಬೀರೂರು 1 ಪುರಸಭೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಭಗವತ್ ನಗರದ ಪಾರ್ಕಿನಲ್ಲಿ ಸಸಿ ನೆಡಲು ಅಧ್ಯಕ್ಷೆ ವನಿತಾ ಮಧು ಸ್ವಸಹಾಯ ಸಂಘದ ಮಹಿಳೆಯರಿಗೆ ಸಸಿ ವಿತರಿಸಿದರು. ಪುರಸಭೆ ಉಪಾಧ್ಯಕ್ಷ ನಾಗರಾಜ್, ಪ್ರಭಾರ ಮುಖ್ಯಾಧಿಕಾರಿ ಪ್ರಕಾಶ್ ಇದ್ದರು.