ಕನ್ನಡಪ್ರಭ ವಾರ್ತೆ, ತುಮಕೂರು
ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ದತ್ತಿ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಹುಬೇಗ ಎಲ್ಲವೂ ಸಿಗಬೇಕೆನ್ನುವ ಆತುರ ವಿದ್ಯಾರ್ಥಿಗಳಲ್ಲಿ ಇರಬಾರದು. ಕಲಿಯುವ ದಿನಗಳಲ್ಲಿ ಶಿಸ್ತು ಮತ್ತು ಶ್ರಮ ಇರಬೇಕು. ಇದರ ಜೊತೆಗೆ ತಾಳ್ಮೆಯೂ ಇರಬೇಕು. ಆಗ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು.ಗುರುಗಳ ಆಶೀರ್ವಾದ ಇಲ್ಲದೆ ನಾವು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಕಾಲೇಜಿನ ದಿನಗಳಲ್ಲಿ ಸಂಸ್ಕಾರವಂತರಾಗಿದ್ದರೆ ಮುಂದಿನ ಭವಿಷ್ಯವೂ ಉತ್ತಮವಾಗಿರುತ್ತದೆ. ಅಂತಹ ಅವಕಾಶಗಳನ್ನು ನಾವು ಬಳಸಿಕೊಂಡಿದ್ದೇವೆ. ನಾವು ಕಲಿಯುವ ದಿನಗಳಲ್ಲಿ ಅವಕಾಶಗಳು ಸೀಮಿತವಾಗಿದ್ದವು. ಈಗ ವಿಶಾಲವಾದ ವ್ಯಾಪ್ತಿ ಇದೆ. ಎಲ್ಲವೂ ಅಂಗೈನಲ್ಲೇ ಸಿಗಲಿದೆ. ಮುಂದಿನ ದಿನಗಳಲ್ಲಿ ಶಿಸ್ತಿನಿಂದ ಜೀವನ ರೂಪಿಸಿಕೊಳ್ಳುವಂತಹ ಅವಕಾಶ ಎಲ್ಲರಿಗೂ ಒದಗಿ ಬರಲಿ ಎಂದು ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಕಡೆಗೆ ಜನತೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಓದಿ ಕೆಲಸ ಸಿಕ್ಕಿದ ನಂತರ ಬಹಳಷ್ಟು ಜನ ಸ್ವಾರ್ಥಿಗಳಾಗುತ್ತಾರೆ. ಕಲಿತ ಶಾಲೆ ಮತ್ತು ಗುರುಗಳನ್ನು ಮರೆಯಬಾರದು. ಕೇವಲ ಸ್ವಂತ ಸಂಪಾದನೆಗೆ ಸೀಮಿತವಾಗಬಾರದು. ಸಮಾಜಕ್ಕೂ ಕೊಡುಗೆ ನೀಡಬೇಕು ಎಂದ ಅವರು, ದತ್ತಿ ನಿಧಿ ಸ್ಥಾಪನೆ ಒಂದು ಉತ್ತಮ ಕಾರ್ಯ. ಇದರಿಂದ ಸಂಬಂಧಗಳು ಹೆಚ್ಚುವುದಲ್ಲದೆ, ನೆನಪುಗಳು ಉಳಿಯುತ್ತವೆ ಎಂದರು.
ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಿ.ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಭಾ ಪುರಸ್ಕಾರ, ದತ್ತಿ ಬಹುಮಾನ ಇವೆಲ್ಲವೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾರ್ಗಗಳಾಗಿದ್ದು, ಇದನ್ನು ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನೀವೂ ಸಹ ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂಬ ಆಶಯ ನಮ್ಮದಾಗಿದೆ. ದತ್ತಿ ಪುರಸ್ಕಾರದ ಉದ್ದೇಶವು ಇದಾಗಿದ್ದು, ನೀವೂ ಸಹ ಹೀಗೆ ಬೆಳೆದಾಗ ನಮಗೆ ಸಂತೋಷವಾಗುತ್ತದೆ. ಅಂತಹ ದಿನಗಳು ನಿಮಗೂ ಬರಲಿ ಎಂದು ಆಶಿಸಿದರು.