- ಸುರಪುರ ತಾಲೂಕು ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆಗೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಬಾಯಿ ಚೌಧರಿ ಭೇಟಿ ನೀಡಿ, ಪರಿಶೀಲಿಸಿ ತಾಲೂಕು ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದರು.ಆಸ್ಪತ್ರೆಯ ಬೆಂಚ್ ಮೇಲೆ ಕುಳಿತಿದ್ದ ಬೋನಾಳದ ಹಿರಿಯ ಮಹಿಳೆ ನೀಲಮ್ಮ ಅವರನ್ನು ಮಾತನಾಡಿಸಿ, ಯಾಕೆ ಬಂದಿದ್ದೀರಿ ಎನ್ನುತ್ತಿದ್ದಂತೆ ಮಹಿಳೆಯೂ ಆರೋಗ್ಯ ಸರಿಯಿಲ್ಲ. ತೋರಿಸಿಕೊಳ್ಳಲು ಬಂದಿದೀನಿ ಅಂದಾಗ, ಗೃಹಲಕ್ಷ್ಮಿ ಮತ್ತು ವೃದ್ಧಾಪ್ಯ ವೇತನ ಬರುತ್ತದೆ ಎಂದು ಕೇಳಿದಾಗ ಬರುವುದಿಲ್ಲ ಎಂಬುದಾಗಿ ತಿಳಿಸಿದರು. ತಕ್ಷಣವೇ ಸಿಡಿಪಿಒ ಮತ್ತು ತಹಸೀಲ್ದಾರ ಅವರನ್ನು ಕರೆಯಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಕ್ಷಣವೇ ಒದಗಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ರೋಗಿಗಳಿಗೆ ಗೃಹಲಕ್ಷ್ಮಿ ಹಣ ಬರುತ್ತಿದೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡರು. ಅಲ್ಲಿಂದ ಶಸ್ತ್ರ ಚಿಕಿತ್ಸಾ ಘಟಕ ಭೇಟಿ ನೀಡಿ ಮಹಿಳೆಯರ ಆರೋಗ್ಯ ಪರಿಶೀಲಿಸಿ ಹೆಣ್ಣು ಮಕ್ಕಳು ಹೆತ್ತವರು ತಪ್ಪದೇ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಬೇಕು ಎಂದು ತಿಳಿಸಿ, ಪ್ರಸವೋತ್ತರ ಆರೈಕೆ ವಾರ್ಡ್ ಭೇಟಿಗೆ ಭೇಟಿ ನೀಡಿ ಮಕ್ಕಳ ತಾಯಂದಿರನ್ನು ಮಾತನಾಡಿಸಿದರು.
ತಾಲೂಕಿನಲ್ಲಿ 4.75 ಲಕ್ಷ ಜನಸಂಖ್ಯೆಗೆ ನಾಲ್ವರು ವೈದ್ಯರು ಮಾತ್ರ ಇದ್ದಾರೆ. ಆಸ್ಪತ್ರೆಗೆ ಕನಿಷ್ಠವೆಂದರೂ 20 ವೈದ್ಯರು ಇರಬೇಕು. ಇದು ದೊಡ್ಡ ಸಮಸ್ಯೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಇತರೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
------
ಸಮಸ್ಯೆ ಪರಿಶೀಲಿಸಿದ್ದೇನೆ. ವರದಿ ನೀಡುವಂತೆಯು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೇಳಿ ಬಿಡುವುದಿಲ್ಲ. ಅದರ ಅನುಸರಣೆ ಮಾಡುತ್ತೇನೆ. ಮುಂದಿನಗಳಲ್ಲಿ ಮತ್ತೊಮ್ಮೆ ಸುರಪುರಕ್ಕೆ ಭೇಟಿ ನೀಡುವೆ. ಜನರೊಂದಿಗೆ ಬೆರೆತಾಗ ಕಷ್ಟ ಅರಿಯಲು ಸಾಧ್ಯ. ಅದನ್ನೇ ಮಾಡುತ್ತಿರುವೆ.:- ಡಾ. ನಾಗಲಕ್ಷ್ಮಿಬಾಯಿ ಚೌಧರಿ, ಮಹಿಳಾ ಆಯೋಗದ ಅಧ್ಯಕ್ಷರು, ಕರ್ನಾಟಕ ರಾಜ್ಯ.
---ಬಾಕ್ಸ್ ---
ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು, ಕಂದಾಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕೆ.ಎಸ್.ಆರ್.ಟಿ.ಸಿ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಮನವಿ ಸ್ವೀಕರಿಸಿ ಕೆಲವು ಸ್ಥಳದಲ್ಲೇ ಪರಿಹರಿಸಿದರು.
ಈ ವೇಳೆ ಮುಂದಿನ ನ.5 ರಂದು ತಹಸೀಲ್ದಾರರು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆ ನಡೆಸಿ ಗ್ರಾಮದ ಸಮಸ್ಯೆಗಳ ಮನವಿ ಲಿಖಿತ ರೂಪದಲ್ಲಿ ಪಡೆದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು.-----
22ವೈಡಿಆರ್9: ಸುರಪುರ ನಗರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಚೌಧರಿ ಮಾತನಾಡಿಸಿದರು.-
22ವೈಡಿಆರ್10: ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂವಾದ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು ಚಾಲನೆ ನೀಡಿದರು.-
22ವೈಡಿಆರ್ : ಸುರಪುರ ತಾಲೂಕಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿರುವುದು.