ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಭೆ ಆರಂಭದಲ್ಲಿ ಆರು ಅಥವಾ ಎಂಟು ತಿಂಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಅಧ್ಯಕ್ಷರಾದವರಿಗೆ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ. ಕನಿಷ್ಠ ಅಧ್ಯಕ್ಷರಿಗೆ 2.5 ವರ್ಷ ಕಾಲಾವಧಿ ಇರಬೇಕು ಎಂದು ಬಿಜೆಪಿ ಸದಸ್ಯಟಿ.ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರು, ಹಾಗಿದ್ದರೆ, ಹಾಲಿ ಅಧ್ಯಕ್ಷೆ ಶೀಲಾ ದಿನೇಶ್ ಅವರನ್ನು ಮುಂದುವರಿಸಿ ನೋಡೋಣ ಎಂದು ಸವಾಲು ಹಾಕಿದರು. ಈ ವೇಳೆ ಮಾತಿಗೆ ಮಾತು ಬೆಳೆದು, ಬಿಜೆಪಿ ಸದಸ್ಯ ರಾಜಶೇಖರ್, ಅಧ್ಯಕ್ಷ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಯನ್ನು ನಿಲ್ಲಿಸುವ ತಾಕತ್ತಿಲ್ಲ ಎಂದರು. ಆಗ ಮುನೀರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಪಕ್ಷದ ತಾಕತ್ತನ್ನು ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ತೋರಿಸಿದ್ದೇವೆ ಎಂದರು.ಪದೇ ಪದೇ ನಗರಸಭೆ ಅಧ್ಯಕ್ಷರನ್ನು ಬದಲಾವಣೆ ಮಾಡಿ ನಗರವನ್ನು ಹಾಳು ಮಾಡುತ್ತಿದ್ದೀರಾ, ನೀವೇ ಅಧ್ಯಕ್ಷರನ್ನು ನೇಮಕ ಮಾಡುತ್ತೀರಾ, ನೀವೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸುತ್ತೀರಾ, ಸಾರ್ವಜನಿಕರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಗರಸಭೆಯ ಕೆಲ ಅಧಿಕಾರಿಗಳು, ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಕರೆ ಮಾಡಿದರೆ ಅಗೌರವದಿಂದ ಮಾತನಾಡುತ್ತಾರೆ. ಅಲ್ಲದೆ ನಗರಸಭೆ ಸದಸ್ಯರ ಕೆಲಸಗಳನ್ನೇ ಮಾಡಿಕೊಡುವುದಿಲ್ಲ. ಸದಸ್ಯರ ಸ್ಥಿತಿಯ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂದು ಸದಸ್ಯರಾದ ಲಕ್ಷ್ಮಣ್, ಪರಮೇಶ್ವರ್, ಮುನೀರ್, ಟಿ.ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
-- ಬಾಕ್ಸ್.....
ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ಅಧಿಕಾರಿಗಳು ಇದನ್ನೆ ದಂಧೆ ಮಾಡಿಕೊಂಡಿದ್ದಾರೆ. ಎಲ್ಲಿಯೂ ಸರಿಯಾಗಿ ರಸ್ತೆ ಗುಂಡಿ ಮುಚ್ಚುತ್ತಿಲ್ಲ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ದಂಧೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಕಳೆದ 7ವರ್ಷಗಳಿಂದ ಟೆಂಡರ್ ಕರೆಯುತ್ತಿರಲಿಲ್ಲ. ಈ ವರ್ಷ ಟೆಂಡರ್ ಕರೆದ ಕ್ಷಣ ಮತ್ತೆ ದಂಧೆ ಶುರುವಾಗಿದೆ ಎಂದು ಸದಸ್ಯ ಟಿ. ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚದಿದ್ದಲ್ಲಿ ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವುದಿಲ್ಲ ಎಂದ ಪೌರಾಯುಕ್ತರು ಕಾಮಗಾರಿ ಮುಗಿದ ತಕ್ಷಣ ಸದಸ್ಯರೊಂದಿಗೆ ತಾವೇ ಖುದ್ದು ಪರಿಶೀಲಿಸಿ ಬಿಲ್ ಪಾವತಿಸುವ ಭರವಸೆ ನೀಡಿದರು.
ಲಂಚ ಹಾವಳಿಗೆ ಆಕ್ರೋಶ
ಇದಕ್ಕೆ ಧ್ವನಿಗೂಡಿಸಿದ ಟಿ.ರಾಜಶೇಖರ್, ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದೆ ಆದಲ್ಲಿ ಈ ಬಗ್ಗೆ ಯಾರಾದರೂ ನಗರಸಭೆಗೆ ದೂರು ನೀಡಿದರೆ ಅಂತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ನಗರಸಭೆ ಆಯುಕ್ತರು ಮೊದಲು ಗಮನ ನೀಡಬೇಕು ಎಂದರು.
ಯಾವುದೇ ಅಧಿಕಾರಿಯಾಗಲಿ, ಗುತ್ತಿಗೆದಾರರ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಂತವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದರು.---ಬಾಕ್ಸ್---
ಪ್ರತಿ ತಿಂಗಳು ಸಭೆ ಮಾಡಿಸಾಮಾನ್ಯ ಸಭೆಯನ್ನು ನಿಯಮ ಪ್ರಕಾರ ಪ್ರತಿತಿಂಗಳು ಮಾಡಬೇಕು. ಆಗ ಸದಸ್ಯರು ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. 3-4 ತಿಂಗಳ ಸಭೆ ಮಾಡುವುದರಿಂದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ಟಿ.ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.