- ಸೌಲಭ್ಯ ಪಡೆಯಲು ದಾಖಲೆಗಳು ಕಡ್ಡಾಯ: ಶ್ವೇತಾ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಕೃಷಿ ಇಲಾಖೆಯಿಂದ ೨೦೨೫-೨೬ನೇ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಸರ್ಕಾರದ ಸಹಾಯಧನದಡಿ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ೨೬ರ ಸೋಮವಾರದಿಂದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಶ್ವೇತಾ ತಿಳಿಸಿದ್ದಾರೆ.ಕಸಬ ಹೋಳಿಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಎಪಿಎಂಸಿ ಆವರಣದಲ್ಲಿ, ಹೊಸಕೆರೆಯ ರೈತ ಸಂಪರ್ಕ ಕೇಂದ್ರದಲ್ಲಿ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಅಣಬೂರು ಎಫ್ಪಿಒ, ಸೊಕ್ಕೆ ಗ್ರಾಮದ ಪಿಎಸಿಸಿಎಸ್, ಬಸವನಕೋಟೆಯ ಪಿಎಸಿಸಿಎಸ್, ಕೆಚ್ಚೇನಹಳ್ಳಿ ಪಿಎಸಿಸಿಎಸ್ ಮತ್ತು ಬಿಳಿಚೋಡು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಗಳು ಲಭ್ಯವಾಗಲಿವೆ ಎಂದಿದ್ದಾರೆ.
- - -
(ಬಾಕ್ಸ್) * ಯಾವ ಬೀಜಗಳಿಗೆ ಎಷ್ಟು ಸಬ್ಸಿಡಿ (ಕೆಜಿಗೆ)ಬೆಳೆಸಾಮಾನ್ಯ ವರ್ಗಎಸ್ಸಿ-ಎಸ್ಟಿ ಮೆಕ್ಕೆಜೋಳ₹೨೦₹೩೦
ಜೋಳ₹೩೦₹೪೦ಸೂರ್ಯಕಾಂತಿ₹೮೦₹೧೨೦
ರಾಗಿ₹೧೮₹೨೭ತೊಗರಿ₹೨೫₹೩೭.೫
ನೆಲಗಡಲೆ₹೧೪₹೨೧- - -
-೨5ಜೆಎಲ್ಆರ್ಚಿತ್ರ೧ಎ: ಶ್ವೇತಾ ಎಚ್.