ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟಕದಿಂದ ಆ.10ರಿಂದ 15ರವರೆಗೆ ಮನೆ ಮನೆಗೆ ತಿರಂಗಾ ಧ್ವಜ ವಿತರಣೆಯ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು.
ಆ.11ರಂದು ಸಂಜೆ 4ಕ್ಕೆ ಅಲ್ಲಮಪ್ರಭು ಮೈದಾನದಿಂದ ಕೃಷ್ಣ ಕೆಫೆ ವೃತ್ತದವರೆಗೆ ಯುವ ಮೋರ್ಚಾದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 1500 ಬೈಕ್ ಸವಾರರು ಪಾಲ್ಗೊಳ್ಳಲಿದ್ದಾರೆ. ಆ.13ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ವೃತ್ತದಲ್ಲಿ ಪಕ್ಷದ ಒಬಿಸಿ ಮೋರ್ಚಾ ವತಿಯಿಂದ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ, ಆ.14ರಂದು ಬೆಳಿಗ್ಗೆ 10ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗೋಪಿ ವೃತ್ತದವರೆಗೆ ನಗರ ಸಮಿತಿಯಿಂದ ಯಾತ್ರೆ ನಡೆಯಲಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಎಸ್. ಜ್ಞಾನೇಶ್ವರ್, ಮಂಜುನಾಥ್, ದೀನದಯಾಳ್, ಪ್ರಕಾಶ್ ಒಟ್ಟಿನಕೊಪ್ಪ, ಲತಾ ಶ್ರೀನಿವಾಸ್, ಯಶೋಧಾ, ಶ್ರೀನಾಗ್, ಮಂಜುನಾಥ್ ನವುಲೆ, ರಂಗೇಶ್, ಪರಮೇಶ್ ನಾಯ್ಕ್, ಮಹಾಲಕ್ಷ್ಮಿ, ರಶ್ಮಿ ಶ್ರೀನಿವಾಸ್, ಪ್ರದೀಪ್, ಗಾಡಿಕೊಪ್ಪ ಕುಮಾರ್, ಮುರಳಿ ಇತರರು ಹಾಜರಿದ್ದರು.