ಚಂದ್ರು ಕೊಂಚಿಗೇರಿ
ನದಿ ತುಂಬೆಲ್ಲ ಬಂಬುಗಳಿಂದ ಮಾಡಿರುವ ತೆಪ್ಪಗಳು, ಮರಳು ತುಂಬಿ ನದಿ ದಡಕ್ಕೆ ಸಾಗಿಸಲು 100ಕ್ಕೂ ಹೆಚ್ಚು ಕಬ್ಬಿಣದ ತೆಪ್ಪಗಳಿವೆ. ನೂರಾರು ಕಾರ್ಮಿಕರು ಎಡದಂಡೆ (ಹಾವೇರಿ ಜಿಲ್ಲೆ) ಭಾಗದಲ್ಲಿ ಈ ಹಿಂದೆ ಮರಳು ಲೂಟಿ ಮಾಡಿ ದೊಡ್ಡ ಪ್ರಮಾಣದ ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮರಳಿನ ಪ್ರಮಾಣ ಕಡಿಮೆ ಇದೆ. ಆದರೆ, ಬಲದಂಡೆ (ವಿಜಯನಗರ ಜಿಲ್ಲೆ) ಭಾಗದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ. ಜಿಲ್ಲೆಗಳ ಗಡಿ ಮೀರಿ ಲೂಟಿಗೆ ಮುಂದಾಗಿದ್ದಾರೆ.
ಸಾವಿನ ಜತೆ ಕಾರ್ಮಿಕರ ಸರಸತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಂದ ನೂರಾರು ಕೂಲಿ ಕಾರ್ಮಿಕರನ್ನು ಕರೆ ತಂದು ಅಕ್ರಮ ಮರಳು ದಂಧೆಕೋರರು ಹಾಡುಹಗಲೇ ಮರಳು ಲೂಟಿ ಮಾಡಿ ದಿಢೀರ್ ಶ್ರೀಮಂತರಾಗುತ್ತಿದ್ದಾರೆ. ಈ ಹಿಂದೆ ಮರಳು ಟಾಸ್ಕ್ಪೋರ್ಸ್ ಸಮಿತಿಯ ಅಧಿಕಾರಿಗಳು ದಾಳಿ ಮಾಡಿದಾಗ, ಕೂಲಿ ಕಾರ್ಮಿಕರು ತಪ್ಪಿಸಿಕೊಳ್ಳಲು ಆಗದೇ ನೀರಲ್ಲೇ ಸಾವನ್ನಪ್ಪಿರುವ ಘಟನೆಗಳಿವೆ. ಸದ್ಯ ನದಿಯಲ್ಲಿ ಭಾರಿ ಪ್ರಮಾಣದ ನೀರಿದೆ. ಸಾಕಷ್ಟು ಆಳವಿರುವ ಕಡೆಗಳಲ್ಲಿ ನದಿ ನೀರಿನಲ್ಲಿ ಮುಳುಗಿ, ತಳದಲ್ಲಿರುವ ಮರಳನ್ನು ಎತ್ತುವ ಸಾಹಸ ಮಾಡುತ್ತಿರುವ ಕಾರ್ಮಿಕರು, ಸಾವಿನ ಜತೆಗೆ ಸರಸವಾಡುತ್ತಿದ್ದಾರೆ.
ಮರಳು ಅಕ್ರಮ ಸಾಗಾಟದ ಮೇಲೆ ಈ ಹಿಂದೆ ಅಧಿಕಾರಿಗಳು ದಾಳಿ ಮಾಡಿದ್ದರು. ಕಾರ್ಮಿಕರು ತೆಪ್ಪದಲ್ಲಿ ನದಿ ನಡುಮಧ್ಯೆ ನಿಂತಿದ್ದರು. ಪೊಲೀಸರು ಹಾಗೂ ಈಜುಗಾರರು ಅವರನ್ನು ಹಿಡಿಯಲು ಹೋದಾಗ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದರು. ನದಿಯಲ್ಲಿ ನೀರಿನ ಆಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾಣಾಪಾಯದ ಭಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನದಿಯಲ್ಲಿ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಮಾಹಿತಿ ನೀಡಿದವರಿಗೆ ಧಮ್ಕಿ
ಟಾಸ್ಕ್ಫೋರ್ಸ್ ಹೆಸರಿಗೆ ಮಾತ್ರ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಬ್ಯಾಲಹುಣ್ಸಿ ಬಳಿ ನದಿ ತೀರಕ್ಕೆ ಹೋದಾಗ, ಕಾರ್ಮಿಕರು ತೆಪ್ಪಗಳ ಸಮೇತ ಹಾವೇರಿ ಕಡೆಗೆ ಪರಾರಿಯಾದರು. ವಿಜಯನಗರ-ಹಾವೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾವೇರಿ ಭಾಗದ ಕಡೆಗೆ ದಾಳಿಗೆ ಮುಂದಾಗಿದ್ದಾರೆ. ದಾಳಿ
ಸಂತೋಷಕುಮಾರ್, ತಹಸೀಲ್ದಾರ್, ಹೂವಿನಹಡಗಲಿ.