ಉಡುಪಿ: 15 ಮಂದಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

KannadaprabhaNewsNetwork |  
Published : Sep 05, 2024, 12:38 AM IST
ಪ್ರಶಸ್ತಿ | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ 5 ವಲಯಗಳಿಂದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ ಒಟ್ಟು 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು - ಮಾಲಿನಿ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಚ್ಚೂರು, ಕಾರ್ಕಳ), ಖಾತುನ್ ಬಿ. (ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ, ಮಲ್ಲಾರು, ಉಡುಪಿ), ರವಿರಾಜ ಶೆಟ್ಟಿ (ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ, ಬ್ರಹ್ಮಾವರ), ಶ್ರೀನಿವಾಸ ಶೆಟ್ಟಿ (ಸಹಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಡು, ಕುಂದಾಪುರ), ಅಮಿತಾ ಬಿ. (ಸಹಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಂದಾಡಿ, ಬೈಂದೂರು)

ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು - ಭಾಸ್ಕರ ಪೂಜಾರಿ (ಸಹಶಿಕ್ಷಕರು, ಕೆ.ಪಿ.ಎಸ್. ಕೊಕ್ಕರ್ಣೆ, ಬ್ರಹ್ಮಾವರ), ರಾಮಕೃಷ್ಣ ಭಟ್ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಂತೂರುಕೊಪ್ಲ, ಉಡುಪಿ), ಶಶಿಕಲಾ ನಾರಾಯಣ ಶೆಟ್ಟಿ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೈರಬೆಟ್ಟು, ಕಾರ್ಕಳ), ಜಯಾನಂದ ಪಟಗಾರ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಂಜಾಲು, ಬೈಂದೂರು), ಸೀತಾರಾಮ ಶೆಟ್ಟಿ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂಗಳೂರು, ಕುಂದಾಪುರ)ಪ್ರೌಢಶಾಲಾ ಶಿಕ್ಷಕರು - ಕಮಲ್ ಅಹ್ಮದ್ (ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಶಿವಪುರ, ಕಾರ್ಕಳ), ಮಂಜುನಾಥ ಶೆಟ್ಟಿ (ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಪ.ಪೂ. ಕಾಲೇಜು ಉಪ್ಪುಂದ, ಬೈಂದೂರು), ಜ್ಯೋತಿಕೃಷ್ಣ ಪೂಜಾರಿ (ಸಹಶಿಕ್ಷಕರು, ಸೋಮ ಬಂಗೇರ ಸರ್ಕಾರಿ ಪ್ರೌಢಶಾಲೆ, ಕೋಡಿಕನ್ಯಾನ, ಬ್ರಹ್ಮಾವರ), ಮಾಲತಿ ವಕ್ವಾಡಿ (ಸಹಶಿಕ್ಷಕರು, ಸರ್ಕಾರಿ ಪ.ಪೂ. ಕಾಲೇಜು, ಮಲ್ಪೆ, ಉಡುಪಿ), ಕರುಣಾಕರ ಶೆಟ್ಟಿ (ಮುಖ್ಯ ಶಿಕ್ಷಕರು, ಕೆ.ಪಿ.ಎಸ್. ಬಿದ್ಕಲ್‌ಕಟ್ಟೆ, ಕುಂದಾಪುರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!