ಜಿಲ್ಲಾದ್ಯಂತ ಕೊನೆ ಶ್ರಾವಣ ಶನಿವಾರದ ಸಂಭ್ರಮ

KannadaprabhaNewsNetwork |  
Published : Sep 01, 2024, 01:50 AM IST
೩೧ಕೆಎಲ್‌ಆರ್-೧೪ಕೋಲಾರದ ದೊಡ್ಡಪೇಟೆಯ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕೊನೆ ಶ್ರಾವಣ ಶನಿವಾರದ ಅಂಗವಾಗಿ ಬಜರಂಗದಳ ಕಾರ್ಯಕರ್ತರು ಇಡೀ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೇ ಭಕ್ತರು ಉದ್ದುದ್ದ ಸರದಿ ಸಾಲಿನಲ್ಲಿ ಬಂದು ಸ್ವಾಮಿಯ ದರ್ಶನ ಪಡೆದರು. | Kannada Prabha

ಸಾರಾಂಶ

ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು., ಉಳಿದಂತೆ ನಗರದ ಪಂಚಮುಖಿ ಆಂಜನೇಯ, ಶನೇಶ್ವರ ಮತ್ತಿತರ ದೇವಾಲಯಗಳಲ್ಲಿ ವಿಶೇಷತೆ ಇತ್ತು.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಾದ್ಯಂತ ಕೊನೆ ಶ್ರಾವಣ ಶನಿವಾರದ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು, ಬಜರಂಗದಳ ಸಂಘಟನೆಯ ಕಾರ್ಯಕರ್ತರು ಇಡೀ ದಿನ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದರು.ಬಜರಂಗದಳ ಕಾರ್ಯಕರ್ತರು ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯವನ್ನು ವಿಶಿಷ್ಟ ರೀತಿಯ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಇಡೀ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆಯಲು ನೆರವಾದರು.ಬಜರಂಗದಳದ ಸೇವೆ

ಬಜರಂಗದಳ ಕಾರ್ಯಕರ್ತರು ಪ್ರತಿವರ್ಷವೂ ಕೊನೆ ಶ್ರಾವಣ ಶನಿವಾರ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮತ್ತು ಕೊನೆ ಕಾರ್ತಿಕ ಸೋಮವಾರ ಅಂತರಗಂಗೆ ಜಾತ್ರೆಯನ್ನು ವೈಭವ ಹಾಗೂ ಶ್ರದ್ದಾಭಕ್ತಿಗಳಿಂದ ಆಚರಿಸಿಕೊಂಡು ಬಂದಿದ್ದು, ಈ ಬಾರಿಯೂ ದೇವಾಲಯವನ್ನು ಅಲಂಕರಿಸುವ ಕಾರ್ಯವನ್ನು ಕಳೆದ ಶುಕ್ರವಾರದಿಂದಲೇ ಆರಂಭಿಸಿದ್ದರು.ಶ್ರಾವಣ ಶನಿವಾರದ ಪ್ರಮುಖ ಅದಿದೇವತೆಯಾದ ಬಾಲಾಜಿ, ವೆಂಕಟೇಶ್ವರಸ್ವಾಮಿಯ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದು, ಮುಂಜಾನೆ ೪ ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು.

ಭಕ್ತರಿಗೆ ಪ್ರಸಾದ ವಿನಿಯೋಗ

ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಇಡೀ ದಿನ ಪೂಜಾ ವ್ಯವಸ್ಥೆ ಮಾಡಿಸಿದ್ದ ಬಜರಂಗದಳ ಕಾರ್ಯಕರ್ತರು ಮತ್ತು ಹಲವಾರು ಭಕ್ತರು ಸಿಹಿಪೊಂಗಲ್, ಖಾರಾಪೊಂಗಲ್, ಪುಳಿಯೊಗರೆ, ಚಿತ್ರಾನ್ನ ಪ್ರಸಾದ ಹಂಚಿಕೆಯಲ್ಲಿ ತೊಡಗಿದ್ದು, ಕಂಡು ಬಂತು.

ಜಿಲ್ಲಾದ್ಯಂತ ವಿಶೇಷ ಪೂಜೆ

ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ನಗರದ ಎಸ್ಪಿ ನಿವಾಸದ ಎದುರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಅರ್ಚಕವೆಂಕಟೇಶ್ ಪೂಜೆಯ ನೇತೃತ್ವ ವಹಿಸಿದ್ದರು. ಉಳಿದಂತೆ ನಗರದ ಪಂಚಮುಖಿ ಆಂಜನೇಯ, ಶನೇಶ್ವರ ಮತ್ತಿತರ ದೇವಾಲಯಗಳಲ್ಲಿ ವಿಶೇಷತೆ ಇತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!