ದೇವರ ಸಾನ್ನಿಧ್ಯದಿಂದ ಮನುಷ್ಯನಿಗೆ ನೆಮ್ಮದಿ: ಶಾಸಕ

KannadaprabhaNewsNetwork |  
Published : Sep 01, 2026, 02:00 AM IST
ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಮಲ್ಲಿಕಾರ್ಜುನ ಚಣೇಗಾಂವ ಅವರ ತೋಟದಲ್ಲಿ ವಿಠ್ಠಲ ರುಕ್ಮಿಣಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಧರ್ಮ ಸಭೆ ಜರುಗಿತು  | Kannada Prabha

ಸಾರಾಂಶ

ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಬೇಕಾದರೆ ದೇವರ ಸಾನ್ನಿಧ್ಯವೇ ಬೇಕು. ಈ ನಿಟ್ಟಿನಲ್ಲಿ ದೇವಸ್ಥಾನಗಳ ನಿರ್ಮಾಣ ಔಚಿತ್ಯವಾಗಿದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು. ತಾಲೂಕಿನ ಮಣ್ಣೂರ ಗ್ರಾಮದ ಮಲ್ಲಿಕಾರ್ಜುನ ಚಣೇಗಾಂವ ಅವರು ತಮ್ಮ ತೋಟದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅಫಜಲಪುರ

ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಬೇಕಾದರೆ ದೇವರ ಸಾನ್ನಿಧ್ಯವೇ ಬೇಕು. ಈ ನಿಟ್ಟಿನಲ್ಲಿ ದೇವಸ್ಥಾನಗಳ ನಿರ್ಮಾಣ ಔಚಿತ್ಯವಾಗಿದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು. ತಾಲೂಕಿನ ಮಣ್ಣೂರ ಗ್ರಾಮದ ಮಲ್ಲಿಕಾರ್ಜುನ ಚಣೇಗಾಂವ ಅವರು ತಮ್ಮ ತೋಟದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಅಫಜಲಪುರ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಗುರುಗಳ ಸಾನ್ನಿಧ್ಯದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಜ್ಞಾನ, ವಿದ್ಯೆ ಮತ್ತು ಸಂಸ್ಕಾರ ದೊರಕಬೇಕು. ವಿನಯವಿಲ್ಲದ ವಿದ್ಯೆಯಿಂದ ಸಂಸ್ಕಾರ ಬೆಳೆಯುವುದಿಲ್ಲ. ಮಕ್ಕಳು ಮುಖ್ಯವಾಗಿ ಶೈಕ್ಷಣಿಕವಾಗಿ ಸುಧಾರಣೆ ಹೊಂದುವುದಲ್ಲದೆ ಅವರಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಸಬೇಕು. ಎಲ್ಲಿ ನಿಷ್ಕಲ್ಮಶ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ ಎಂದರುಬಸವಲಿಂಗ ಮಹಾಸ್ವಾಮಿಗಳು, ವೇದಮೂರ್ತಿ ಹಾಲಯ್ಯ ಹಿರೇಮಠ, ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಜಿಲ್ಲಾ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಮಹಾದೇವಪ್ಪ ಕರೂಟಿ, ರಾಚಪ್ಪ ಕೊಪ್ಪಾ, ಶಿವಶರಣಪ್ಪ ರೋಡಗಿ, ಸಿದ್ರಾಮಪ್ಪ ಹಿರೇಕುರುಬರ, ಹಣಮಂತ ಖಂಡೇಕಾರ, ಶರಣಗೌಡ ಪಾಟೀಲ, ಬದರಿಆಚಾರ್ಯ ಜಹಾಗಿರದಾರ, ಚಂದ್ರಶೇಖರ ಹೊಸೂರಕರ, ವಿಶ್ವನಾಥ ಚಣೇಗಾಂವ, ವಿಶ್ವನಾಥ ಕರೂಟಿ, ಅಡಿವೆಪ್ಪ ಕರಜಗಿ, ಕಾಶೀನಾಥ ಚಣೇಗಾಂವ, ಚೋಳಪ್ಪ ಆಲೂರ, ವಿಶ್ವನಾಥ ಅಜಗೊಂಡ, ಸಿದ್ದಪ್ಪ ಹತ್ತರಕಿ, ಅಣ್ಣಾರಾವ ಮುಜಗೊಂಡ ದತ್ತಪ್ಪ ಡೊಂಬಾಳೆ, ಕಲ್ಲಪ್ಪ ಅಲ್ಲಾಪೂರ, ತುಕಾರಾಮ ಚಣೇಗಾಂವ, ಪಂಡಿತ ಬಂಡಗಾರ, ಬಸವರಾಜ ವಾಯಿ ಅಪ್ಪಾಸಾಬ ಹೊಸೂರಕರ, ಯಶ್ವಂತ ಕರೂಟಿ ಸುಭಾಷ ವಾಲಿ, ಬಸವರಾಜ ಕರೂಟಿ, ನಿಖಿಲ ಚಣೇಗಾಂವ, ವೇಣುಮಾಧವ ಅವಧಾನಿ, ಸಂತೋಷ ಅಲ್ಲಾಪೂರ, ಶ್ರೀಕಾಂತ ನಿವರಗಿ, ರಾಜಶೇಖರ ಪ್ಯಾಟಿ, ಶ್ರೀಶೈಲ ಭುಯ್ಯಾರ, ನಾಮದೇವ ಚೋಪಡೆ ಪಾಂಡುರಂಗ ಚೋಪಡೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

KPSC ನೇಮಕಾತಿ ಅಕ್ರಮ: ಬೀದರ್‌ನಲ್ಲೇ ಬೇರು
ಅಫಜಲಪುರ ಆಸ್ಪತ್ರೆಗೆ ಕೆಕೆಆರ್‌ಟಿಸಿ ಅಧ್ಯಕ್ಷ ಭೇಟಿ