ಡಿಕೆಶಿ ಮುಂದಿನ ಸಿಎಂ: ನಲವಡಿಯಲ್ಲಿ ಬೆಂಬಲಿಗರ ಕೂಗು

KannadaprabhaNewsNetwork |  
Published : Nov 04, 2023, 12:31 AM IST
ಡಿ.ಕೆ.ಶಿವಕುಮಾರಗೆ ಪುಷ್ಪಾರ್ಚನೆ ಮಾಡಲಾಯಿತು. | Kannada Prabha

ಸಾರಾಂಶ

ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಜೈ ಎಂಬ ಕೂಗು ಕೇಳಿ ಬಂದಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ ಪರ ಶಕ್ತಿ ಪ್ರದರ್ಶನವಾದಂತಾಯಿತು. ಡಿ.ಕೆ., ಡಿಕೆ, ಡಿಕೆ ಎಂಬ ಉದ್ಗಾರವೂ ಕೇಳಿ ಬಂತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಜೈ ಎಂಬ ಕೂಗು ಕೇಳಿ ಬಂದಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ ಪರ ಶಕ್ತಿ ಪ್ರದರ್ಶನವಾದಂತಾಯಿತು. ಡಿ.ಕೆ., ಡಿಕೆ, ಡಿಕೆ ಎಂಬ ಉದ್ಗಾರವೂ ಕೇಳಿ ಬಂತು. ಗದಗದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೆರಳುತ್ತಿದ್ದರು. ಅಣ್ಣಿಗೇರಿ ತಾಲೂಕಿನ ನಲವಡಿಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಈ ವೇಳೆ ಜೆಸಿಬಿ ಮೂಲಕ ಡಿ.ಕೆ. ಶಿವಕುಮಾರಗೆ ಪುಷ್ಪಾರ್ಚನೆಯನ್ನೂ ಮಾಡಲಾಯಿತು. ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಷಣ್ಮುಖ ಶಿವಳ್ಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ