ಬಳ್ಳಾರಿ: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ 31ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿದ ದೊಡ್ಡನಗೌಡರು ಆಧುನಿಕ ಶಿಕ್ಷಣದ ಹೆಚ್ಚಿನ ಅವಕಾಶಗಳಿಲ್ಲದ ಕಾಲಘಟ್ಟದಲ್ಲೇ ಸ್ವಯಂಪ್ರೇರಿತ ಅಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡಿದರು. ಸಾಹಿತ್ಯ ಮತ್ತು ಕಲೆಯ ಮೇಲಿನ ಅಪಾರ ಆಸಕ್ತಿ ಅವರನ್ನು ಜನಮನಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿತು. ನಾಟಕ ರಚನೆ, ಅಭಿನಯ ಹಾಗೂ ನಿರ್ದೇಶನದಲ್ಲಿ ಅವರು ತೋರಿದ ಸಾಮರ್ಥ್ಯ ಅಪಾರವಾಗಿತ್ತು. ತಮ್ಮದೇ ನಾಟಕ ಕಂಪೆನಿಯನ್ನು ಸ್ಥಾಪಿಸಿ ರಾಜ್ಯದಾದ್ಯಂತ ಸಂಚರಿಸಿ ಕನ್ನಡ ರಂಗಭೂಮಿಯನ್ನು ಜನಸಾಮಾನ್ಯರ ಮನೆಮಾತಾಗಿಸಲು ಅಪಾರವಾಗಿ ಶ್ರಮಿಸಿದರು.
ಗಮಕ ಕ್ಷೇತ್ರದಲ್ಲಿಯೂ ದೊಡ್ಡನಗೌಡರ ಸಾಧನೆ ಅನನ್ಯವಾಗಿತ್ತು. ಮಹಾಭಾರತ, ರಾಮಾಯಣ ಸೇರಿದಂತೆ ಹಲವು ಪೌರಾಣಿಕ ಕೃತಿಗಳನ್ನು ಗಮಕ ಶೈಲಿಯಲ್ಲಿ ಜನರಿಗೆ ತಲುಪಿಸುವ ಮೂಲಕ ಸಾಹಿತ್ಯದ ಸವಿಯನ್ನು ಜನಮನಗಳಲ್ಲಿ ಮೂಡಿಸಿದರು. ಅವರ ಧ್ವನಿಯ ಮಧುರತೆ ಮತ್ತು ಅರ್ಥಪೂರ್ಣ ನಿರೂಪಣೆ ಶ್ರೋತೃಗಳನ್ನು ಆಕರ್ಷಿಸುತ್ತಿತ್ತು. ಸಾಹಿತ್ಯವನ್ನು ಕೇವಲ ಪುಸ್ತಕಗಳೊಳಗೆ ಸೀಮಿತಗೊಳಿಸದೇ ಜನರ ಬದುಕಿನ ಭಾಗವನ್ನಾಗಿಸಲು ಅವರು ಮಾಡಿದ ಪ್ರಯತ್ನಗಳು ಗಮನಾರ್ಹವಾಗಿವೆ ಎಂದು ತಿಳಿಸಿದರಲ್ಲದೆ, ಗೌಡರು ಬಳ್ಳಾರಿ ರಾಘವರ ಶಿಷ್ಯರಾಗಿದ್ದರು ಎಂಬುದೇ ಹೆಮ್ಮೆಯ ಸಂಗತಿ ಹೇಳಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ದೊಡ್ಡನಗೌಡರ ಕುಟುಂಬ ಸದಸ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಸೋಸಿಯೇಷನ್ ನ ಗೌರವಾಧ್ಯಕ್ಷ ಕೆ.ಚನ್ನಪ್ಪ, ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಉಪಾಧ್ಯಕ್ಷ ಬಾಣಾಪುರ ರಮೇಶ ಗೌಡ, ಖಜಾಂಚಿ ಪಿ.ಧನಂಜಯ, ಕೆ.ಪೊಂಪನ ಗೌಡ,
ಎಸ್ .ಪಿ ಹೊಂಬಳ ಗದಗ ಅವರು ಗಮಕ ವಾಚನ ಮಾಡಿದರು. ಎನ್.ಪ್ರಕಾಶ್ ಹಾಗೂ ಪಿ.ಎಂ.ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.