ಕನ್ನಡಪ್ರಭ ವಾರ್ತೆ ಉಡುಪಿ
ಪ್ರಾತಃಕಾಲ ಪ್ರಧಾನ ಯಾಗ ಹಾಗೂ ಬೆಳಗ್ಗೆ ಒದಗಿದ 9.45ರ ಮಿಥುನ ಲಗ್ನ ಸುಮಹೂರ್ತದಲ್ಲಿ ಕುಂಭಾಭಿಷೇಕ ನೆರವೇರಿತು.
ಕ್ಷೇತ್ರದ ಆನಂದ ಬಾಯರಿ ದುರ್ಗಾ ಆದಿಶಕ್ತಿ ದೇವಿಯನ್ನು ಸರ್ವಾಲಂಕೃತಗೊಳಿಸಿದರು. ಮಹಾಪೂಜೆಯನ್ನು ಕ್ಷೇತ್ರದ ಅರ್ಚಕ ಅನಿಶ್ ಆಚಾರ್ಯ ನೆರವೇರಿಸಿದರು. ಪಲ್ಲಪೂಜೆಯ ಬಳಿಕ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಡಾ. ಮಂಜರಿ ಚಂದ್ರ ಪುಷ್ಪರಾಜ ನೇತೃತ್ವದ ಸೃಷ್ಟಿ ಕಲಾಕುಟೀರದ ನೃತ್ಯಾರ್ಥಿಗಳಿಂದ ಹಾಗೂ ಭ್ರಮರಿ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ್ ಶಿಷ್ಯರಿಂದ ನಿರಂತರ ನೃತ್ಯಸೇವೆ ನೆರವೇರಿತು.ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ವಿಜಯ ಶೇರಿಗಾರ್ ಮತ್ತು ಬಳಗದವರಿಂದ ನಾದ ಸೇವೆ ನೆರವೇರಿತು. ಮಧ್ಯಾಹ್ನ ಮಹಾಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ದೇವತಾರಾಧನೆ, ಸಮಾರಾಧನೆ ಹಾಗೂ ಕಲಾರಾಧನೆಯಿಂದ ಉತ್ಸವ ಮಹೋತ್ಸವವಾಗಿ ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ ತಿಳಿಸಿದ್ದಾರೆ.