ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದಲ್ಲಿ ಭಾನುವಾರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ಗಳಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಒಳ್ಳೆಯ ವ್ಯಕ್ತಿ ಅವನು ವೈರಿ ಆಗಿದ್ದರೂ ಸಹ ಅವರಿಗೆ ಸಾಲವನ್ನು ಕೊಡಬೇಕು. ನಷ್ಟ ಮಾಡುವ ವ್ಯಕ್ತಿಗೆ ಸಾಲ ನೀಡದಂತೆ ಸಲಹೆ ನೀಡಿದರು.
ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಹಕಾರಿ ರಂಗದಲ್ಲಿ ಇಂದು ಬಹಳಷ್ಟು ಬದಲಾವಣೆಯಾಗುತ್ತಿದೆ. ಬ್ಯಾಂಕ್ಗಳು ಬೆಳೆಯಬೇಕಾದರೆ ಎಲ್ಲರ ಸಹಕಾರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರಿ ಸಂಘ ಕೊಲ್ಹಾರ ಪಟ್ಟಣದಲ್ಲಿ ಅಧ್ಯಕ್ಷ ಉಸ್ಮಾನ್ ಪಟೇಲ ಹಾಗೂ ಉಪಾಧ್ಯಕ್ಷ ವಿನಿತ್ ಕುಮಾರ ದೇಸಾಯಿಯವರ ನೇತೃತ್ವದಲ್ಲಿ ಬೆಳೆಯಲಿ. ಬರುವ ದಿನಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ನಿಂದ ಈ ಸಹಕಾರಿ ಸಂಘಕ್ಕೆ ನಾನು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಪ್ರಾಸ್ತಾವಿಕವಾಗಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರ ಸಂಘದ ಅಧ್ಯಕ್ಷ ಉಸ್ಮಾನ್ ಪಟೇಲ ಮಾತನಾಡಿ, ಈ ಭಾಗದ ರೈತರಿಗೆ, ಬಡವರಿಗೆ, ಬೀದಿ ಬದಿಯ ವ್ಯಾಪಾರಸ್ಥರಿಗೆ ಅನಕೂಲುವಾಗಲೆಂದು ನಾವೆಲ್ಲ ಆಡಳಿತ ಮಂಡಳಿ ನಿರ್ದೇಶಕರು ಸೇರಿ ಈ ಸಂಘವನ್ನು ಪ್ರಾರಂಭಿಸಿದ್ದೇವೆ. ಇಂದು ಈ ಬ್ಯಾಂಕಿಗೆ ಒಂದು ತಿಂಗಳಿನಲ್ಲಿ ಸಹಕಾರಿ ಸಂಘದ ಅನುಮತಿ ಪಡೆದು 15 ದಿನಗಳಲ್ಲಿ ₹ 7.11 ಲಕ್ಷ ಶೇರ್ ಹಣವನ್ನು ಸಂಗ್ರಹಿಸಿ ಅನುಮತಿ ಪಡೆದಿದ್ದೇವೆ. ₹ 51 ಲಕ್ಷ ಎಫ್ಡಿ ಹಣ ಜಮಾ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಶೇರುದಾರರಿಗೆ ಸಚಿವ ಶಿವಾನಂದ ಪಾಟೀಲ ಸನ್ಮಾನಿಸಿದರು. ದಿವ್ಯಸಾನಿಧ್ಯವನ್ನು ಬೇಲೂರು ಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಕೋಡಿಮಠ ಗಜೇಂದ್ರಗಡದ ಡಾ.ಶರಣ ಬಸವ ಮಹಾಸ್ವಾಮಿಜೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಎಸ್.ಆರ್.ಮಲ್ನಾಡ, ಕೆ.ಎಸ್.ದೇಸಾಯಿ, ಆರ್.ಬಿ.ಪಕಾಲಿ, ಬಿ.ಯು.ಗಿಡ್ಡಪ್ಪಗೋಳ, ಎಸ್.ಬಿ.ಪತಂಗಿ, ಸಿ.ಎಸ್.ಗಿಡ್ಡಪ್ಪಗೋಳ, ಬ್ಯಾಂಕಿನ ಉಪಾಧ್ಯಕ್ಷ ವಿನೀತಕುಮಾರ ದೇಸಾಯಿ, ಸಿ.ಎಮ್.ಗಣಕುಮಾರ ಸೇರಿದಂತೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು. ಪರಶುರಾಮ ಗಣಿ ಕಾರ್ಯಕ್ರಮ ನಿರೂಪಿಸಿದರು.