ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ತಾಲೂಕಿನಲ್ಲಿ ಕಳೆದ 8 ದಿನಗಳಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಕುರುಬ ಸಮಾಜ ಬಾಂಧವರು ಇರುವ ತಾಲೂಕಿನ 35 ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಂಭ್ರಮದಿಂದ ಬರಮಾಡಿಕೊಂಡು ಉದಾರವಾಗಿ ದೇಣಿಗೆ ನೀಡಿದ್ದು, ಒಟ್ಟು 40 ಲಕ್ಷ ರೂ. ಸಂಗ್ರಹವಾಗಿರುತ್ತದೆ. ಈ ಹಣವನ್ನು ಹೊಸದುರ್ಗ ಶಾಖಾ ಮಠದಲ್ಲಿ ನಡೆಯುತ್ತಿ ರುವ ಶಾಲಾ ಕಾಲೇಜು ಕಟ್ಟಡ, ಹಾಸ್ಟೆಲ್ ಕಟ್ಟಡ ಮತ್ತು ವಿಶ್ವದ ಅತ್ಯಂತ ಎತ್ತರವಾದ ಕನಕದಾಸ ಏಕಶಿಲಾ ಮೂರ್ತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಳಸಿ ಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನಕ ನೌಕರರ ಬಳಗದ ಪದಾಧಿಕಾರಿಗಳು ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರು ಗಳಾದ ಜಿ.ಸಿ.ನಿಂಗಪ್ಪ, ಬಿ.ಎಂ.ಸತೀಶ್, ಮಾಯಕೊಂಡ ಮಲ್ಲಿಕಾರ್ಜುನಪ್ಪ, ಅಣಬೇರು ಶಿವಮೂರ್ತಿ, ಸಿ.ಡಿ.ಮಹೇಂದ್ರ, ಕರೇಕಟ್ಟೆ ಶಿವರುದ್ರಪ್ಪ, ಮತ್ತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜಪ್ಪ, ಶಿಕ್ಷಕ ಶಂಕರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.