ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ದಸಂಸ ಕಾರ್ಯಕರ್ತರು, ಯತ್ನಾಳ್ ಪ್ರತಿಕೃತಿಯನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿ, ನಂತರ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದಾಗ್ಯೂ ಪ್ರತಿಕೃತಿ ದಹನಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ದಲಿತ ಸಮುದಾಯದವರ ಬಗ್ಗೆ ನಾಲಿಗೆ ಹರಿಯಬಿಟ್ಟು ಅವಮಾನ ಮಾಡಿದ ಯತ್ನಾಳ್ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆತನನ್ನು ದಲಿತ ಮಹಿಳೆಯರು ೨೦೨೮ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕಲಿದ್ದಾರೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡರಾದ ನರಸಿಂಹಮೂರ್ತಿ, ಕೃಷ್ಣ, ಚೀರನಹಳ್ಳಿ ಲಕ್ಷ್ಮಣ್, ನಿರಂಜನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಆಟೋಕೃಷ್ಣ, ನಂಜುಂಡಮೌರ್ಯ ಇತರರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾತುಂಗೆರೆ ಶಾಖೆಯ ಎಟಿಎಂ ಕೇಂದ್ರಕ್ಕೆ ನಾಯಿಗಳ ಹಿಂಡು ಲಗ್ಗೆಯಿಟ್ಟು ಗ್ರಾಹಕರು ಭಯಭೀತರನ್ನಾಗುವಂತೆ ಮಾಡಿತು. ಎಟಿಎಂ ಕೇಂದ್ರದೊಳಗೆ ನಾಯಿಗಳು ಬೀಡು ಬಿಟ್ಟಿದ್ದರಿಂದ ಹಣ ಡ್ರಾ ಮಾಡಲು ಬರುವ ಗ್ರಾಹಕರಲ್ಲಿ ಕೆಲಕಾಲ ಆತಂಕವನ್ನು ಸೃಷ್ಟಿಸಿದ್ದವು.
ಎಟಿಎಂ ಕೇಂದ್ರದಲ್ಲಿ ವಾಚ್ ಮೆನ್ ಇಲ್ಲದಿದ್ದ ಕಾರಣ ನಾಯಿಗಳ ಗುಂಪು ಒಳ ಹೊಕ್ಕು ಮಲಗಿದ್ದವು. ಎಟಿಎಂ ಕೇಂದ್ರಕ್ಕೆ ಶ್ವಾನ ಪಡೆಗಳೇ ಝಡ್- ಶ್ರೇಣಿಯ ಭದ್ರತೆ ಒದಗಿಸುತ್ತಿರುವುದಾಗಿ ಸಾರ್ವಜನಿಕರು ಕಿಡಿಕಾರಿ ವಾಚ್ಮೆನ್ ನಿಯೋಜಿಸುವಂತೆ ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.