ಕಿಂಗ್ ಕೊಹ್ಲಿ ತಂಡಕ್ಕೆ ಸೀಜನ್-೬ ಚಾಂಪಿಯನ್ ಪಟ್ಟಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಟೆಸ್ಟ್ ಸೀಜನ್೦೬ರ ಕ್ರಿಕೆಟ್ ಅಂತಿಮ ಪಂದ್ಯಾವಳಿಯಲ್ಲಿ ಕಿಂಗ್ ಕೊಹ್ಲಿ ತಂಡಕ್ಕೆ ಟ್ರೋಪಿ ವಿತರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ತಂಡದಲ್ಲಿ ಪಾಲ್ಗೊಂಡು ಎಷ್ಟು ಉತ್ತಮ ಪ್ರದರ್ಶನ ನೀಡಿದ್ದೀನಿ ಎನ್ನುವುದು ಬಹುಮುಖ್ಯ ಎಂದರು.
ಕ್ರಿಕೆಟ್ ಇವತ್ತು ಅತೀ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಅದರಂತೆ ಎಲ್ಲಾ ಕ್ರೀಡೆಯಲ್ಲೂ ಇಂತಹ ಆಸಕ್ತಿಯನ್ನು ಕ್ರೀಡಾಪಟುಗಳು ಹೊಂದಬೇಕು. ಅಂದಾಗ ಅಂತಾರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲು ಅನುಕೂಲವಾಗುತ್ತದೆ. ಯುವಕರು ಹೆಚ್ಚು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.ಪ್ರಥಮ ಸ್ಥಾನ ಪಡೆದ ಕಿಂಗ್ ಕೊಹ್ಲಿ ತಂಡ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಾಸ್ಟರ್ ಬ್ಲಾಸ್ಟರ್ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.ಪ್ರಶಸ್ತಿ ವಿತರಣೆ:
ಈ ವೇಳೆಯಲ್ಲಿ ಕ್ರೀಡಾಪಟುಗಳಾದ ಪ್ರಕಾಶ ಛಲವಾದಿ, ಬಸವರಾಜ ಅಬ್ಬಿಗೇರಿ, ಸುರೇಶ್ ಛಲವಾದಿ, ಧನಿಯಪ್ಪ ಬಣಕಾರ್, ಮಹಾಂತೇಶ ಛಲವಾದಿ, ಸಿರಾಜ್, ಬಾಬು ಟೆಂಗಿನಕಾಯಿ, ಪ್ರಕಾಶ ಉಂಗ್ರಾಣಿ, ಮಲ್ಲು ಸಾದರಖಾನ, ದೇವಿಶಕ್ತಿ ಪ್ರಸಾದ್ ಮತ್ತಿತರರು ಇದ್ದರು.