ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಂತರ ಮಾತನಾಡಿದ ಶಾಸಕರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗಿದೆ. ಇನ್ನಷ್ಟು ಕೆಲಸಗಳು ಬಾಕಿ ಇದ್ದು ಪ್ರತಿಮೆಗೆ ಮೇಲ್ಚಾವಣಿ ಸೇರಿದಂತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಈ ದೇಶಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡಿಗೆ ಅಪಾರವಾಗಿದೆ. ಪ್ರತಿ ದಿನ ಅವರ ಸ್ಮರಣೆಯಿಂದಲೇ ಪ್ರತಿಯೊಂದು ಕೆಲಸಗಳು ನಡೆಯುತ್ತಿವೆ. ಅವರ ತತ್ವ, ಆದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದರು.ಈ ವೇಳೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಮುಖ್ಯಾಧಿಕಾರಿ ಎಂ.ರಾಜಣ್ಣ, ದಲಿತ ಸಂಘಟನೆ ಚಂದ್ರಶೇಖರ್, ರವಿಚಂದ್ರ, ಸುರೇಶ್, ಗ್ರಾಪಂ ಸದಸ್ಯ ಅಪ್ಪಾಜಿ, ಹೊನ್ನಯ್ಯ, ಶಿವಯ್ಯ, ಮೋಹನ್, ಸಿಪಿಐ ಪ್ರಕಾಶ್ ಸೇರಿದಂತೆ ದಲಿತ ಸಂಘಟನೆಯ ಹಿರಿಯ ಮುಖಂಡರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.ಡಿಕೆಶಿ ಪರ ತೀರ್ಪು ಸತ್ಯಮೇವ ಜಯತೆ ಸಾಬೀತು: ನರೇಂದ್ರಸ್ವಾಮಿ
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ ಅರ್ಜಿಗಳನ್ನು ಹೈಕೊರ್ಟ್ ವಜಾ ಗೊಳಿಸಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳ ಮೂಲಕ ಹಲವು ಕೇಸ್ಗಳನ್ನು ದಾಖಲಿಸಿ ಸುಳ್ಳು ದಾಖಲಾತಿ ಸೃಷ್ಟಿಸಿ ಜೈಲಿಗೂ ಹೋಗುವಂತೆ ಮಾಡಿ ನಿರಂತರವಾಗಿ ಹಿಂಸೆ ನೀಡಿದರು ಎಂದರು.ರಾಜ್ಯದಲ್ಲಿ ಇವರು ಅನುಭವಿಸಿದಷ್ಟು ನೋವನ್ನು ಯಾರು ಅನುಭವಿಸಿಲ್ಲ. ಇವತ್ತಿನ ನ್ಯಾಯಾಲಯದ ತೀರ್ಪೂ ನ್ಯಾಯದ ಪರವಾಗಿ ಇದೆ. ನ್ಯಾಯಾಲದಲ್ಲಿ ಇನ್ನೂ ಜನರ ನಂಬಿಕೆ ಇಟ್ಟುಕೊಂಡು ದೇಶದಲ್ಲಿ ಸಂವಿಧಾನದ ಆಧಾರದ ಮೇಲೆ ನ್ಯಾಯವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನ್ಯಾಯಾಲಯ ತಿಳಿಸಿದೆ ಎಂದರು.