ಕನ್ನಡಪ್ರಭ ವಾರ್ತೆ ಮಂಡ್ಯ
ಮಾನವ ವಿರೋದಿ ಪದ್ಧತಿಗಳು ತುಂಬಿ ತುಳುಕುತ್ತಿದ್ದ ಭಾರತ ದೇಶದಲ್ಲಿ ಅಂಬೇಡ್ಕರ್ ಅಂತಹ ಒಬ್ಬ ವ್ಯಕ್ತಿ-ವ್ಯಕ್ತಿತ್ವ ಹುಟ್ಟದೇ ಇರುತ್ತಿದ್ದರೆ ಅಸ್ಪೃಶ್ಯತೆ, ಜಾತಿ ತಾರತಮ್ಯ, ಪುರುಷ ಪ್ರಾಧಾನ್ಯ, ಅನಿಷ್ಠ ಪದ್ಧತಿಗಳು, ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ಹೊತ್ತ ಭಾರತದ ಪರಿಸ್ಥಿತಿ ಈಗ ಹೇಗೆ ಇರುತ್ತಿತ್ತು ಎಂದು ನುಡಿದರು.
ಅಂದು ಅಂಬೇಡ್ಕರ್ ಅವರು ಹಠ ಹಿಡಿದು ಶಿಕ್ಷಣವನ್ನು ಪಡೆದು ಶಿಕ್ಷಣವನ್ನೇ ತಮ್ಮ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡರು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಉನ್ನತ ಶಿಕ್ಷಣವನ್ನು ಪಡೆದರು, ಎಷ್ಟೇ ಕಠಿಣ ಸಂದರ್ಭಗಳಿದ್ದರೂ, ದೃಢಸಂಕಲ್ಪವು ಪ್ರತಿಯೊಂದು ಗುರಿಯನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದರು ಎಂದು ಸ್ಮರಿಸಿದರು.ಸಂವಿಧಾನ ಮೂಲಕ ಸರ್ವ ಜನಾಂಗವನ್ನು ಉದ್ದರಿಸಿದ ಕೀರ್ತಿ ವಿಶ್ವಜ್ಞಾನಿ ಅಂಬೇಡ್ಕರ್ ಅವರಿಗೆ ಸಲ್ಲಿಸುತ್ತದೆ. ಮೀಸಲಾತಿ ಮೂಲಕ ಉದ್ಯೋಗ, ಆರ್ಥಿಕ ಭದ್ರತೆ, ಮತದಾನದಿಂದ ರಾಜಕೀಯ ಶಕ್ತಿ ನೀಡಿದ ಬಾಬಾಸಾಹೇಬರಿಗೆ ಎಲ್ಲರೂ ಚಿರಋಣಿಗಳಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನಸೇನೆ ಕರ್ನಾðಟಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ಚಂದಗಾಲು ವಿಜಯ್ಕುಮಾರ್, ಮುಡಾ ಮಾಜಿ ಸದಸ್ಯೆ ಕಮಲಾರಾಜ್, ದೇವರಾಜ್, ಯೋಗೇಶ್ ಮಂಗಲ, ದಸಂಸ ಎಂ.ವಿ.ಕೃಷ್ಣ, ಸುವರ್ಣವತಿ, ಸಬ್ರಿನ್ತಾಜ್ ಮತ್ತಿತರರಿದ್ದರು.