ಡಾ. ಮಹಾಂತ ಶಿವಯೋಗಿ ಅಪ್ರತಿಮ ಸಂತ: ಟಿ.ಕೆ. ಕಾಂಬಳೆ

KannadaprabhaNewsNetwork |  
Published : Aug 02, 2025, 12:00 AM IST
ಹಾನಗಲ್ಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಸ್ಮರಣೆ ಪ್ರಯುಕ್ತ ವ್ಯಸನಮುಕ್ತ ದಿನದ ಅಂಗವಾಗಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ಸ್ವಸ್ಥ ಬದುಕಿನ ಎಲ್ಲ ಸಂದೇಶಗಳು ಪ್ರತಿ ಮನೆ ಮನಕ್ಕೆ ತಲುಪಬೇಕಾಗಿದೆ.

ಹಾನಗಲ್ಲ: ಸ್ವಾಸ್ಥ್ಯಪೂರ್ಣ ಸಮಾಜದ ಕನಸು ಕಂಡ ಡಾ. ಮಹಾಂತ ಶಿವಯೋಗಿಗಳು ನಾಡು ಕಂಡ ಅಪ್ರತಿಮ ಸಂತ ಎಂದು ತಾಲೂಕು ಶಿರಸ್ತೇದಾರ ಟಿ.ಕೆ. ಕಾಂಬಳೆ ತಿಳಿಸಿದರು.ಶುಕ್ರವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಗಳ ಸ್ಮರಣೆಯ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಸ್ವಸ್ಥ ಬದುಕಿನ ಎಲ್ಲ ಸಂದೇಶಗಳು ಪ್ರತಿ ಮನೆ ಮನಕ್ಕೆ ತಲುಪಬೇಕಾಗಿದೆ. ಮನುಷ್ಯನಿಗೆ ದುರಭ್ಯಾಸಗಳು ಭವಿಷ್ಯದ ಬದುಕನ್ನೇ ನಾಶ ಮಾಡುತ್ತಿರುವ ಈ ಸಂದರ್ಭದಲ್ಲಿ ಸ್ವಸ್ಥ ಸಮಾಜದ ಸಂದೇಶಗಳು ತಲುಪಿ ಉತ್ತಮ ಸಮಾಜ ನಿರ್ಮಾಣ ಅತ್ಯಗತ್ಯವಾಗಿದೆ. ಪ್ರತಿ ವ್ಯಕ್ತಿ ಈ ನಿಟ್ಟಿನಲ್ಲಿ ಶ್ರಮಿಸಿದರೆ ಮಾತ್ರ ಸ್ವಸ್ಥ ಸಮಾಜದ ಕನಸ ನನಸಾಗಬಲ್ಲದು ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಮಠಗಳು ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹರಸಾಹಸಕ್ಕೆ ಮುಂದಾಗಿವೆ. ವ್ಯಸನಮುಕ್ತ ಸಮಾಜದ ಕನಸು ಕಂಡ ಡಾ. ಮಹಾಂತ ಶಿವಯೋಗಿಗಳ ಕನಸು ನನಸಾಗಲು ಇಂತಹ ಜಾಗೃತಿ ಅತ್ಯವಶ್ಯವಾಗಿದೆ ಎಂದರು.ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಾದ ಮಹೇಶ ತ್ರಿಕಾಣಿ, ರಚನಾ ಗೋವೆಕರ, ಮೀನಾಕ್ಷಿ ಲಕ್ಕುಂಡಿ, ಸುನಿತಾ ಸುಳದೋಳಕರ, ಸಿ.ಸಿ. ಕದಂ, ಮಾಲತೇಶ ಉಳವಣ್ಣನವರ, ಧರ್ಮಪ್ಪ ನೇಗಿನಹಾಳ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಯತ್ನ

ಶಿಗ್ಗಾಂವಿ: ತಾಲೂಕಿನ ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ ಮಾಡುವ ಜತೆಗೆ ಶಿಗ್ಗಾಂವಿ ತಾಲೂಕನ್ನು ಮಾದರಿ ಮಾಡಲು ಸಂಘಗಳ ಮೂಲ ಸೌಕರ್ಯಗಳ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ತಿಳಿಸಿದರು.ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಶಿಗ್ಗಾಂವಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ(ಹಾವೆಮುಲ್) ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಹಾಗೂ ನಂದಿನಿ ಡೀಲರ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಾಲು ಉತ್ಪಾದಕರ ಸಂಘಗಳ ಹಾಲಿನ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನ ಹಾವೇರಿ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ವಹಿಸಿದ್ದರು. ಹಾವೆಮುಲ್ ನಾಮನಿರ್ದೇಶಕ ಶಂಕರಗೌಡ ಪಾಟೀಲ, ನಿರ್ದೇಶಕ ಶಶಿಧರ ಯಲಿಗಾರ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಎಸ್.ಎಂ., ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಸಮಿತಿಯ ತಾಲೂಕಾದ್ಯಕ್ಷ ಎಸ್.ಎಫ್‌. ಮಣಕಟ್ಟಿ, ಮುಖಂಡರಾದ ಶಿವಾನಂದ ಬಿಳೆಕುದರಿ, ಮಾಲತೇಶ ಸಾಲಿ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...