ಕನ್ನಡಪ್ರಭ ವಾರ್ತೆ ಗೌರಿಬಿದನೂರು
ದೇಶದ ಅಖಂಡತೆಗೆ ಹೋರಾಟ
ಬಿಜೆಪಿ ಮುಖಂಡ ಎನ್.ಎಂ.ರವಿ ನಾರಾಯಣ ರೆಡ್ಡಿ ಮಾತನಾಡಿ, ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿಯಂದು ಅವರನ್ನು ಎಲ್ಲರೂ ಸ್ಮರಿಸಬೇಕು ಎಂದರು ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್ ರವರು ಮಾತನಾಡಿ ಶ್ಯಾಮ ಪ್ರಸಾದ್ ಮುಖರ್ಜಿ ಅಪ್ರತಿಮ ದೇಶಪ್ರೇಮಿ ಕಾಶ್ಮೀರದ 370 ನೇ ವಿಧಿ ರದ್ದಿಗೆ ಹೋರಾಟ ಮಾಡಿದ್ದರು. ಕಾಂಗ್ರೆಸ್ನಲ್ಲಿದ್ದರೂ ಅವರನ್ನು ಅಂದಿನ ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ನೊಂದ ಅವರು ಅಲ್ಲಿಂದ ಹೊರಬಂದು ಜನಸಂಘ ಕಟ್ಟಿದರು ಎಂದರು ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿಗಳಾದ ವೇಣುಮಾಧವ ಜಯಣ್ಣ ಉಪಾಧ್ಯಕ್ಷರುಗಳಾದ ರಾಘವೇಂದ್ರ ವೆಂಕಟಾದ್ರಿ ಮಂಜುನಾಥ ಶೋಬನ್ ಬಾಬು ಶಾಂತಕುಮಾರ್ ಮುದ್ದುಕೃಷ್ಣ ಪಾರ್ವತಮ್ಮ ಅಜಯ್ ಮಣಿಕಂಠ ಮಾರುತಿ ಫ್ಯಾಕ್ಟರಿ ರಮೇಶ ಕೃಷ್ಣಯ್ಯ ಶಟ್ಟಿ ಅನ್ನಪೂರ್ಣ ಮಂಜು ಅನಿಲ್ ಪರಮೇಶ್ ದ್ವಾರಕೀಶ್ ಉಪಸ್ಥಿತರಿದ್ದರು.