ಕನ್ನಡಪ್ರವಾರ್ತೆ ಬೆಳಗಾವಿ
ರಾಜಕುಮಾರ ತಮ್ಮ ತಂದೆಯವರೊಂದಿಗೆ ಗುಬ್ಬಿ ವೀರಣ್ಣ ನೇತೃತ್ವದ ತಂಡದಲ್ಲಿ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇಲ್ಲಿಯೇ ರಾಜಕುಮಾರ್ ತಮ್ಮ ನಟನೆ ಮತ್ತು ಗಾಯನ ಕೌಶಲ್ಯ ಪ್ರಾರಂಭಿಸಿದರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಮುತ್ತು ರಾಜು ಚಿತ್ರರಂಗ ಪ್ರವೇಶಿಸಿ. ತದನಂತರ ರಾಜಕುಮಾರ್ ಆಗಿ ತಮ್ಮ ಜೀವನದುದ್ದಕ್ಕೂ ಮನೆ ಮನ ಮಾತಾದರು ಎಂದು ತಿಳಿಸಿದರು.
ಸಿಟಿಇ ಕಾಲೇಜು ಉಪನ್ಯಾಸಕಿ ಝಡ್.ಜಿ. ಸಯ್ಯದ್, ಸಣ್ಣ ಉಳಿತಾಯ ಖಾತೆ ಸಹಾಯಕ ನಿರ್ದೇಶಕ ವಿ.ಎಂ.ಕಂಗ್ರಾಳಕರ್, ಶಿಕ್ಷಣ ಇಲಾಖೆ ವಿಷಯ ಪರಿವಿಕ್ಷಕ ಎಂ.ಎಂ.ಪಾಟೀಲ, ಮುಖ್ಯೋಪಾಧ್ಯಾಯ ಎಸ್.ಎಸ್.ಘೋರ್ಪಡೆ, ದೈಹಿಕ ಶಿಕ್ಷಕ ಎಂ.ಪಿ ನಿಚ್ಚಣಕಿ, ಶಿಕ್ಷಕ ಎ.ಬಿ.ಕಾಮಣ್ಣವರ, ಅಧೀಕ್ಷಕ ಎಂ.ಬಿ.ಉಘಾಡೆ, ದ್ವಿತೀಯ ದರ್ಜೆ ಸಹಾಯಕ ಗಜಾನನ ಹಳೆಮನಿ ಮತ್ತು ಮಹಾಬಳೇಶ್ವರ ಸಾಬಣ್ಣವರ, ವಾರ್ತಾ ಇಲಾಖೆ ಪ್ರಶಿಕ್ಷಣಾರ್ಥಿ ನೀಲಾ ಹೊಸಮನಿ, ಸಿದ್ದೇಶ್ವರ ದಾಸಪ್ಪಗೊಳ, ಸಂತೋಷ್ ಕಾಂಬಳೆ ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಿಬ್ಬಂದಿ ಅನಂತ ಪಪ್ಪು ಸ್ವಾಗತ ಕೋರಿದರು.