ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ನಯನಜ ಕ್ಷತ್ರೀಯ ಸಮಾಜ ಸಂಘದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆ ಆಧಾರದ ಮೇಲೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ಭಾಷಿಕ ಕುಲದ ಹಿತರಕ್ಷಣೆ ಕರ್ನಾಟಕ ಸರ್ಕಾರದ ಜವಾಬ್ದಾರಿ. ಆದರೆ, ಆಳುವ ಸರ್ಕಾರಗಳ ದೂರದೃಷ್ಟಿಯ ಕೊರತೆಯಿಂದ ಕನ್ನಡಿಗರು ಕನ್ನಡ ನಾಡಿನಲ್ಲಿಯೇ ಅನ್ಯಾಯ ಆಕ್ರಮಣಕ್ಕೆ ಒಳಗಾಗಿದ್ದಾರೆ ಎಂದು ವಿಷಾದಿಸಿದರು.
ಕನ್ನಡ ನೆಲದಲ್ಲಿ ಭಾಷೆ ಕಲಿಸುವುದಕ್ಕೂ ಕಾನೂನು ತೊಡಕು ಎದುರಾಗಿದೆ. ಅನ್ಯ ಭಾಷಿಕರು ಕನ್ನಡ ಕಲಿಯುವ ಬದಲು ಮಾತನಾಡಿ ಎಂದು ಹೇಳಿದರೆ ಹಲ್ಲೆ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ ಎಂದು ಕಿಡಿಕಾರಿದರು.ಈ ನೆಲದಲ್ಲಿ ಕನ್ನಡದ ಮಕ್ಕಳಿಗೆ ಉದ್ಯೋಗ ದೊರಕುತ್ತಿಲ್ಲ. ಕೇವಲ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಸಂಭ್ರಮಿಸಿದರೆ ಕನ್ನಡಿಗರ ಬದುಕು ಬದಲಾಗುವುದಿಲ್ಲ. ಕನ್ನಡದ ಮಕ್ಕಳಿಗೆ ಉದ್ಯೋಗ ದೊರಕಲು ಸರ್ಕಾರ ಸರೋಜಿನಿ ಮಹಿಷಿ ಆಯೋಗದ ವರದಿ ಅಂಗೀಕರಿಸಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿದರು.
ಕನ್ನಡಿಗರಾದ ನಯನಜ ಕ್ಷತ್ರೀಯ ಸಮಾಜಕ್ಕೂ ಸವಿತಾ ಸಮಾಜಕ್ಕೂ ಪರಸ್ಪರ ಸಂಬಂಧವೇ ಇಲ್ಲ. ನಮ್ಮ ಆಚಾರ-ವಿಚಾರ ಭಾಷೆಗಳೇ ಬೇರೆ, ಸವಿತಾ ಸಮಾಜದವರ ಆಚಾರ ವಿಚಾರ-ಭಾಷೆಗಳೇ ಬೇರೆ. ರಾಜ್ಯಾದ ಹಲವೆಡೆ ಹಡಪದ ಸಮುದಾಯದಿಂದ ಗುರುತಿಸಿಕೊಳ್ಳುವ ಕ್ಷೌರಿಕ ಕುಲದವರಿದ್ದಾರೆ ಎಂದರು.
ಈ ವೇಳೆ ಸಮುದಾಯದ ಮುಖಂಡರಾದ ಗೋವಿಂದರಾಜು, ಪುಟ್ಟಸ್ವಾಮಿ, ವೆಂಕಟರಾಮು, ಶ್ಯಂ ಸುಂದರ್, ನಂಜುಂಡ, ಮರಿಯ್ಯಯ್ಯ, ರಾಮಕೃಷ್ಣ, ಮಂಜುನಾಥ್, ಮುರುಕನಹಳ್ಳಿ ಮೋಹನ್, ಹಾದನೂರು ಸ್ವಾಮಿ, ಶಾಂತಮೂರ್ತಿ, ವಿನಯ್, ಆರ್.ಮಂಜುನಾಥ್ ಸೇರಿದಂತೆ ಹಲವರಿದ್ದರು.