ಕನಕಪುರ: ಬಸ್ ನಿಲ್ದಾಣದ ಬಳಿ ಚಿನ್ನದ ಆಭರಣವಿದ್ದ ಬ್ಯಾಗು ಬಿಟ್ಟು ಹೋಗಿದ್ದ ಮಹಿಳೆಗೆ ಬಸ್ ಘಟಕದ ಅಧಿಕಾರಿಗಳು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಕನಕಪುರ: ಬಸ್ ನಿಲ್ದಾಣದ ಬಳಿ ಚಿನ್ನದ ಆಭರಣವಿದ್ದ ಬ್ಯಾಗು ಬಿಟ್ಟು ಹೋಗಿದ್ದ ಮಹಿಳೆಗೆ ಬಸ್ ಘಟಕದ ಅಧಿಕಾರಿಗಳು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ಕನಕಪುರ ಬಸ್ ಘಟಕಕ್ಕೆ ಸೇರಿದ್ದ ಕನಕಪುರ-ಕೊಳ್ಳೆಗಾಲ
ಮಾರ್ಗದ ಬಸ್ನಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ಮೂಲದ ಚಿನ್ನಮ್ಮ 75 ಗ್ರಾಂ ತೂಕದ 6 ಲಕ್ಷ ರು. ಮೌಲ್ಯದ ಚಿನ್ನಾಭರಣದ ಬ್ಯಾಗ್ ಬಿಟ್ಟು ಹೋಗಿದ್ದು ಇದನ್ನು ಗಮನಿಸಿದ ಬಸ್ ಚಾಲಕ ದಾಸಪ್ಪ ಹಾಗೂ ನಿರ್ವಾಹಕ ಶಿವಕುಮಾರ್ ಬ್ಯಾಗನ್ನು ಬಸ್ ಘಟಕದ ವ್ಯವಸ್ಥಾಪಕ ನರಸಿಂಹರಾಜು ಬಳಿ ನೀಡಿದ್ದರು. ಬ್ಯಾಗ್ ಕಳೆದುಕೊಂಡ ಮಹಿಳೆ ಈ ಬಗ್ಗೆ ತನ್ನ ಕುಟುಂಬದೊಂದಿಗೆ ಕನಕಪುರ ಬಸ್ ಘಟಕಕ್ಕೆ ಆಗಮಿಸಿ ವಿಚಾರಿಸಿದ ವೇಳೆ ಸಂಪೂರ್ಣ ವಿವರ ಪಡೆದ ವ್ಯವಸ್ಥಾಪಕ ನರಸಿಂಹರಾಜು ಆಭರಣದ ಬ್ಯಾಗನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ. ಚಿನ್ನಾಭರಣದ ಬ್ಯಾಗ್ ಪಡೆದ ಮಹಿಳೆ ಬಸ್ ಚಾಲಕ ಹಾಗೂ ನಿರ್ವಾಹಕರ ಪ್ರಮಾಣಿತೆಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಹಾಯಕ ಬಸ್ ನಿಯಂತ್ರಕ ಸೋಮ, ಚಾಲಕ ದಾಸಪ್ಪ, ನಿರ್ವಾಹಕ ಶಿವಕುಮಾರ್ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.