ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಚಾಂಷುಗರ್ಸ್ ಕಾರ್ಖಾನೆ ಮತ್ತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಸಹಯೋಗದಲ್ಲಿ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ಗಳಿಗೆ ರೇಡಿಯಮ್ ರಿಪ್ಲೆಕ್ಟರ್ಗಳನ್ನು ಅಳವಡಿಸಿ ಮಾತನಾಡಿದ ಅವರು, ಸ್ಪಷ್ಟವಾಗಿ ಕಾಣುವಂತೆ ರೆಡಿಯಮ್ ರಿಪ್ಲೆಕ್ಟರ್ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮಾಲೀಕರಿಗೆ ಸೂಚಿಸಿದರು.
ಕಬ್ಬು ಸರಬರಾಜು ಮಾಡುವ ಲಾರಿ, ಟ್ರ್ಯಾಕ್ಟರ್ ಚಾಲಕರಿಗೆ ಹಾಗೂ ಎತ್ತಿನಗಾಡಿಗಳ ಹೊಂದಿರುವ ರೈತರಿಗೆ ಕೆಲವು ನಿಬಂಧನೆ, ಮಾರ್ಗಸೂಚಿ ಹೊರಡಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ವಾಹನಗಳಿಗೆ ತೂಕದ ಮಿತಿ ನಿಗದಿ ಮಾಡಲಾಗಿದೆ. ಎತ್ತಿನಗಾಡಿಯಲ್ಲಿ 3 ರಿಂದ 3.5 ಟನ್ ಸೇರಿದಂತೆ ಒಟ್ಟು ತೂಕ 6 ಟನ್ಗಿಂತ ಹೆಚ್ಚಿರಬಾರದು. ಟ್ರ್ಯಾಕ್ಟರ್ಗಳಲ್ಲಿ 6 ರಿಂದ 8 ಟನ್ವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಿತಿಗಿಂತ ಹೆಚ್ಚಿದ್ದರೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸ್ವೀಕರಿಸುವುದಿಲ್ಲ. ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ಎಚ್ಚರಿಸಿದರು.ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿರಬೇಕು. ಒಂದು ಟ್ರ್ಯಾಕ್ಟರ್ ಎಂಜಿನ್ಗೆ ಎರಡು ಟ್ರೈಲರ್ಗಳಲ್ಲಿ ಅತಿ ಎತ್ತರಕ್ಕೆ ಕಬ್ಬು ತುಂಬಿ ಸಾಗಾಣೆ ನಿಯಂತ್ರಿಸಬೇಕು. ಚಕ್ರಗಳು (ಟೈರ್ಗಳು) ಸುಸ್ಥಿತಿಯಲ್ಲಿರಬೇಕು. ಜೊತೆಗೆ ಎಫ್ಸಿ ಚಾಲನೆ, ಚಾಲಕರಿಗೆ ಚಾಲನಾ ಪರವಾನಿಗೆ ಸೇರಿದಂತೆ ಇನ್ನಿತರ ದಾಖಲೆಗಳು ಕಡ್ಡಾಯವಾಗಿರಬೇಕು ಎಂದು ಸೂಚಿಸಿದರು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಭವಿಸುವ ಅಪಘಾತಗಳಿಗೆ ಅಥವಾ ರಸ್ತೆಯಲ್ಲಿ ಕಬ್ಬು ಬಿದ್ದು ಸಾರ್ವಜನಿಕರಿಗೆ ತೊಂದರೆಯಾದರೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರಾಗುತ್ತಾರೆ ಎಂದರು.