ವೆಂಕಟೇಶ್ ಕಲಿಪಿ
ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಮುನ್ನೆಚ್ಚರಿಕೆಯಿಂದ ಬಂಧಿಸಿಡಲು ಆದೇಶ ಹೊರಡಿಸುವಾಗ ಪೊಲೀಸ್ ಇಲಾಖೆ ಮಾಡುವ ಲೋಪಗಳೇ ಬಂಧಿತರ ತ್ವರಿತ ಬಿಡುಗಡೆಗೆ ಕಾರಣವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ.
ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಣೆ ತಡೆ ಕಾಯ್ದೆ ಅಡಿ ವ್ಯಕ್ತಿಯೋರ್ವನನ್ನು ಬಂಧಿಸಲು ಆದೇಶಿಸಿದಾಗ, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಂಧಿತನಿಗೆ ಒದಗಿಸುವುದು ಕಡ್ಡಾಯ. ಈ ನಿಯಮ ಪಾಲಿಸದ ಕಾರಣ, ಒಂದು ವರ್ಷ ಜೈಲಿನಲ್ಲಿರಬೇಕಾದ ಆರೋಪಿಗಳು ಬಹುಬೇಗ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗುತ್ತಿದ್ದಾರೆ.ಪೊಲೀಸರ ಕರ್ತವ್ಯ ಲೋಪದಿಂದ ಈ ಕಾಯ್ದೆಯಡಿ ಬಂಧನಕ್ಕೆ ಒಳಗಾದ ದಾವಣಗೆರೆಯ ಆರೋಪಿಯೋರ್ವ ಮೂರೇ ತಿಂಗಳಲ್ಲಿ ಬಂಧಮುಕ್ತನಾಗಿದ್ದಾನೆ.
ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಬಂಧನ ಆದೇಶ ಹೊರಡಿಸಲು ಆಧರಿಸಿದ ದಾಖಲೆಗಳನ್ನು ಬಂಧಿತನಿಗೆ ನೀಡಬೇಕೆಂದು ಮಣಿಪುರ ಸರ್ಕಾರ ಬುಯಮಯುಮ್ ನಡುವಿನ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯನ್ನು ಪೊಲೀಸರು ಪಾಲನೆ ಮಾಡಿಲ್ಲ. ಆದ್ದರಿಂದ ಹುಸೇನ್ ಬಂಧನ ಆದೇಶವನ್ನು ರದ್ದುಪಡಿಸಲಾಗುತ್ತಿದೆ. ಬಂಧಿತನನ್ನು ಬಿಡುಗಡೆ ಮಾಡಬೇಕು ಎಂದು ಇತ್ತೀಚೆಗೆ ಆದೇಶಿಸಿದೆ.
ಸಂತೆಬೆನ್ನೂರು ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ದಾವಣಗೆರೆ ಜಿಲ್ಲಾ ಎಸ್ಪಿ ಶಿಫಾರಸು ಮೇರೆಗೆ ದಾವಣಗೆರೆ ಪೂರ್ವ ವಲಯದ ಐಜಿಪಿ ಅವರು ಹುಸೇನ್ ಅನ್ನು ಪಿಐಟಿಎನ್ ಡಿಪಿಎಸ್ ಕಾಯ್ದೆಯ ಅಡಿ ಬಂಧಿಸಲು 2026ರ ಫೆ.23ರಂದು ಆದೇಶಿಸಿದ್ದರು. ಅದರಂತೆ ಆತನನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಐಜಿಪಿಯ ಆದೇಶ ರದ್ದುಪಡಿಸಿ, ತನ್ನನ್ನು ಬಂಧಮುಕ್ತ ಮಾಡಲು ಆದೇಶಿಸುವಂತೆ ಕೋರಿ ಹುಸೇನ್ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದನು.
ಸರ್ಕಾರದ ಪರ ವಕೀಲರು, ದಾಖಲೆಗಳನ್ನು ಅರ್ಜಿದಾರನಿಗೆ ಒದಗಿಸಿರುವ ಕುರಿತ ಸ್ವೀಕೃತ ಪ್ರತಿಯು ಪ್ರಕರಣಕ್ಕೆ ಸಂಬಂಧಿಸಿದ ಕಡತದಲ್ಲಿ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಹುಸೈನ್ ಬಿಡುಗಡೆಗೆ ಆದೇಶಿಸಿದೆ.
ಕಾಯ್ದೆ ಏನು ಹೇಳುತ್ತೆ?