ಕನ್ನಡಪ್ರಭ ವಾರ್ತೆ ಕುದೂರು
ಕುದೂರು ಗ್ರಾಮದ ಶ್ರೀಮಹಂತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಓದುವ ಬದಲಾಗಿ ಮೊಬೈಲ್ ನಲ್ಲಿ ರೀಲ್ಸ್ ಮಾಡುತ್ತಾ, ನೋಡುತ್ತಾ ಕಾಲ ಕಳೆದರೆ ಯಾವೊಂದು ಲಾಭವಾಗುವುದಿಲ್ಲ. ನಮ್ಮ ಮೆದುಳು ಕೂಡಾ ಹರಿತವಾಗುವುದಿಲ್ಲ. ಮೊಬೈಲ್ ಗೀಳಿನಿಂದಾಗಿ ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕನ್ನಡದ ಉಪನ್ಯಾಸಕ ತಾಯಣ್ಣ ಮಾತನಾಡಿ, ವಯಸ್ಸಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಬದಲಾಗಿ ಜ್ಞಾನ ಮತ್ತು ಸಂಸ್ಕಾರಗಳಿಂದ ದೊಡ್ಡವರೆನಿಸಿಕೊಳ್ಳುತ್ತಾರೆ. ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಗೆದ್ದವರಿಗೆ ಮಾತ್ರ ಹೊಗಳಿಕೆ, ಸನ್ಮಾನ ಸತ್ಕಾರಗಳೆಲ್ಲಾ. ಆದ್ದರಿಂದ ಗೆಲುವಿನ ಪಯಣಕ್ಕೆ ಎಲ್ಲರೂ ಶ್ರಮಿಸಬೇಕು. ಜೀವನದ ಲೆಕ್ಕವಿರದ ದಾರಿಗಳಲ್ಲಿ ಪ್ರತಿಯೊಬ್ಬರಿಗೂ ಗೆಲುವು ಇದ್ದೇ ಇರುತ್ತದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಸಾವಿತ್ರಿಬಾಯಿ ವಹಿಸಿದ್ದರು.
ವರ್ಗಾವಣೆಗೊಂಡ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಕುದೂರು ಗ್ರಾಮಪಂಚಾಯ್ತಿ ಉಪಾಧ್ಯಕ್ಷೆ ರಮ್ಯಜ್ಯೋತಿ, ವೀರಭದ್ರಪ್ಪ, ಪರಮೇಶ್, ಗರುಡಯ್ಯ, ಯೋಗೇಶ್ ಸಂಪತ್ಕುಮಾರ್, ಶ್ರೀನಿವಾಸ್, ಹನುಮಂತರಾಜು, ಅಭಿಷೇಕ ಹಾಜರಿದ್ದರು.