ಬಾಣಸಂದ್ರ ಸೊಸೈಟಿ ಅಧ್ಯಕ್ಷರಾಗಿ ದುಂಡ ದೇವರಾಜ್ ಆಯ್ಕೆ

KannadaprabhaNewsNetwork |  
Published : Feb 13, 2025, 12:45 AM IST
12 ಟಿವಿಕೆ 4 – ತುರುವೇಕೆರೆ ತಾಲೂಕು ಬಾಣಸಂದ್ರದ ಪಿಎಸಿಎಸ್ ಅಧ್ಯಕ್ಷರಾಗಿ ದುಂಡ ದೇವರಾಜ್, ಉಪಾಧ್ಯಕ್ಷರಾಗಿ ಕೋಡಿಹಳ್ಳಿ ಸಾವಿತ್ರಮ್ಮ ಆಯ್ಕೆಯಾದರು. | Kannada Prabha

ಸಾರಾಂಶ

12 ಮಂದಿ ಸದಸ್ಯರ ಬಲವಿರುವ ಈ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ದುಂಡ ದೇವರಾಜ್ ರವರಿಗೆ 7 ಮತಗಳು ಹಾಗೂ ಇವರ ಪ್ರತಿಸ್ಪರ್ಧಿ ಪಾಂಡುರಂಗೇಗೌಡರಿಗೆ 5 ಮತಗಳು ಲಭಿಸಿದವು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಬಾಣಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದುಂಡ ದೇವರಾಜ್, ಉಪಾಧ್ಯಕ್ಷರಾಗಿ ಕೋಡಿಹಳ್ಳಿಯ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ.

12 ಮಂದಿ ಸದಸ್ಯರ ಬಲವಿರುವ ಈ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ದುಂಡ ದೇವರಾಜ್ ರವರಿಗೆ 7 ಮತಗಳು ಹಾಗೂ ಇವರ ಪ್ರತಿಸ್ಪರ್ಧಿ ಪಾಂಡುರಂಗೇಗೌಡರಿಗೆ 5 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಡಿಹಳ್ಳಿ ಸಾವಿತ್ರಮ್ಮನವರಿಗೆ 7 ಮತಗಳು ಹಾಗೂ ಅವರ ಪ್ರತಿಸ್ಪರ್ಧಿ ಗಂಗಾಧರಯ್ಯಗೆ 5 ಮತಗಳು ಲಭಿಸಿದವು.

ಚುನಾವಣಾಧಿಕಾರಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರವರು, ಅಧ್ಯಕ್ಷರಾಗಿ ದುಂಡ ದೇವರಾಜ್, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಚುನಾವಣೆ ವೇಳೆ ಸದಸ್ಯರಾದ ದುಂಡ ದೇವರಾಜ್, ಕೋಡಿಹಳ್ಳಿ ಸಾವಿತ್ರಮ್ಮ ನಾಗರಾಜ್, ಶಿವರಾಮಯ್ಯ, ನಿಜಗುಣಮೂರ್ತಿ, ಭೈರಪ್ಪಾಜಿ, ಸಂತೋಷ್ ಕಂಟ್ಲಿ, ಪಾಂಡುರಂಗೇಗೌಡ, ಗಂಗಾಧರಯ್ಯ, ಭಾರತಿ, ಕೃಷ್ಣೇಗೌಡ, ಆನಂದ್, ಕಾರ್ಯದರ್ಶಿ ನವೀನ್ ಕುಮಾರ್ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಣಸಂದ್ರ ಪ್ರಕಾಶ್, ದುಂಡ ನವೀನ್ ಕುಮಾರ್, ಸಂಘದ ಮಾಜಿ ಅಧ್ಯಕ್ಷ ಹನುಮೇಗೌಡ, ಶ್ರೀನಿವಾಸ್, ಕಮಲಮ್ಮ ಸೇರಿದಂತೆ ಹಲವರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ