ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳಿಂದ ಇತಿಹಾಸ ಸೃಷ್ಟಿ: ವಸಂತಕುಮಾರ್‌

KannadaprabhaNewsNetwork |  
Published : Oct 14, 2024, 01:19 AM IST
ತರೀಕೆರೆಯಲ್ಲಿ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಉದ್ಗಾಟನಾ ಸಮಾರಂಭ | Kannada Prabha

ಸಾರಾಂಶ

ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳು ರಾಜ್ಯದಲ್ಲೇ ಇತಿಹಾಸ ಸೃಷ್ಟಿಸಿವೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳು ರಾಜ್ಯದಲ್ಲೇ ಇತಿಹಾಸ ಸೃಷ್ಟಿಸಿವೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ಭಾನುವಾರ ತರೀಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ ಹಾಗೂ ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಹೊರ ರಾಜ್ಯಗಳಿಂದಲೂ ಅನೇಕ ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಮೈಸೂರು ದಸರಾ ಬಿಟ್ಟರೆ ತರೀಕೆರೆ ಕುಸ್ತಿ ಸ್ಪರ್ಧೆಗಳು ಎಲ್ಲಡೆ ಪ್ರಖ್ಯಾತಿ ಪಡೆದಿದೆ ಎಂದು ಅವರು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಿರುವುದು ಸಂತೋಷ ತಂದಿದೆ, ಮೈಸೂರು ದಸರಾ ಬಿಟ್ಟರೆ ತರೀಕೆರೆಯಲ್ಲಿ ಬಯಲು ಕುಸ್ತಿ ಸ್ಪರ್ಧೆ ನೆಡೆಯುತ್ತದೆ, ಕುಸ್ತಿ ಕ್ರೀಡೆಯು ಗ್ರಾಮೀಣ ಕ್ರೀಡೆಯಾಗಿದೆ. ಪುರಸಭೆ ವತಿಯಿಂದ ನಾಗರಿಕರ ಪರವಾಗಿ ಕುಸ್ತಿ ಸ್ಪರ್ಧೆಗೆ ಬೆಳ್ಳಿ ಗದೆಯನ್ನು ಪ್ರತಿವರ್ಷ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ (ಬೈಟು) ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಬಯಲು ಕುಸ್ತಿ ಸ್ಪರ್ಧೆಗಳು ವಿಶೇಷ ಸ್ಥಾನ ಪಡೆದಿವೆ, ಹಿರಿಯರು ಮತ್ತು ಮಾಜಿ ಪೈಲ್ವಾನರಾದ ವಗ್ಗಪ್ಪರ ಮಂಜಣ್ಣ ಅವರ ಮಾರ್ಗದರ್ಶನದಲ್ಲಿ ಕುಸ್ತಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಹಾಗೂ ದಾನಿಗಳ ಪ್ರೋತ್ಸಾಹದಿಂದ, ಎಲ್ಲಾ ಸಮಾಜದವರ ಸಹಕಾರದಿಂದ ಈ ಕುಸ್ತಿ ಕಲೆ ಉಳಿಸಿ ಬೆಳೆಸಲಾಗುತ್ತಿದೆ. ಯುವ ಪೀಳಿಗೆ ಸದೃಢರಾಗಬೇಕು. ತರೀಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘವು ವ್ಯವಸ್ಥಿತವಾಗಿ ಈ ಕುಸ್ತಿ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಜಿ. ಲೋಕೇಶ್ ಮಾತನಾಡಿ, ಪಟ್ಟಣದಲ್ಲಿ ಪುರಾತನ ಕಾಲದಿಂದಲೂ ಈ ಕುಸ್ತಿ ಸ್ಪರ್ಧೆ ನೆಡೆದುಕೊಂಡು ಬರುತ್ತಿದೆ. ಇಲ್ಲಿ ನೆಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಹೊರ ರಾಜ್ಯಗಳಿಂದಲೂ ಕುಸ್ತಿ ಪೈಲ್ವಾನರು ಭಾಗವಹಿಸುತ್ತಾರೆ. ಕುಸ್ತಿಯು ದೇಹವನ್ನು ಸದೃಢವಾಗಿ ಬೆಳೆಸುತ್ತದೆ. ಯುವಕರು ಯಥೇಚ್ಛವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ಪುರಸಭೆ ನಾಮನಿರ್ದೇಶನ ಸದಸ್ಯ ಟಿ.ಜಿ. ಮಂಜುನಾಥ್ ಮಾತನಾಡಿ, ಇಡೀ ರಾಜ್ಯದಲ್ಲೇ ಪಟ್ಟಣದಲ್ಲಿ ಕುಸ್ತಿ ಸ್ಪರ್ಧೆಗಳು ಬಹಳ ಚೆನ್ನಾಗಿ ನಡೆಯುತ್ತವೆ. ಮಹಾರಾಷ್ಟ್ರ ಇತ್ಯಾದಿ ಹೊರ ರಾಜ್ಯಗಳಿಂದಲೂ ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಎಲ್ಲ ಕುಸ್ತಿ ಪಟುಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ತರೀಕೆರೆ ಕುಸ್ತಿಗೆ ಇತಿಹಾಸವಿದೆ. ಕುಸ್ತಿ ಕಲೆ ನಶಿಸಿಹೋಗಬಾರದು. ಎಲ್ಲಾ ಕ್ರೀಡಾಪಟುಗಳಿಗೂ ಪ್ರಾತಿನಿಧ್ಯ ಸಿಗಲಿ ಎಂದು ಹೇಳಿದರು.

ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಜಯಸ್ವಾಮಿ ಸಿ.(ಕಾರೆ) ಮಾತನಾಡಿ, ಮೂರು ದಿನಗಳ ಕಾಲ ಕುಸ್ತಿ ಸ್ಪರ್ಧೆ ನಡೆಯುತ್ತದೆ. ಎಲ್ಲಾ ಸಮಾಜದ ಬಂಧುಗಳು ಸಹಕರಿಸಿದ್ದಾರೆ ಎಂದು ಅವರು ಹೇಳಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿದರು. ಮಾಜಿ ಪೈಲ್ವಾನರಾದ ವಗ್ಗಪ್ಪರ ಮಂಜಣ್ಣ, ಪುರಸಭೆ ಸದಸ್ಯರಾದ ಚೇತನ್, ಬಸವರಾಜ್, ನಾಮನಿರ್ದೇಶನ ಸದಸ್ಯರಾದ ಆದಿಲ್ ಪಾಷ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಪದಾಧಿಕಾರಿಗಳು, ಸದಸ್ಯರು, ಶ್ರೀನಿವಾಸ್, ಟಿ.ಸಿ.ದರ್ಶನ್, ಶಂಕರ್ (ಆಟೋ) ಗಿರೀಶ್, ರಾಕೇಶ್, ಬಾಬು, ಪ್ರವೀಣ್ ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌