ಕನ್ನಡಪ್ರಭವಾರ್ತೆ ಚಳ್ಳಕೆರೆ
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇಂದಿಗೂ ನಾವು ಹಿರಿಯರ ಮುಂದಾಲೋಚನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದಾಗ ನಮಗೆ ಆಶ್ಚರ್ಯವಾಗುವುದು ಸಹಜ. ನಾವೆಲ್ಲರೂ ನಮ್ಮ ಬದುಕನ್ನು ಅರ್ಥಗರ್ಭಿತವಾಗಿ ನಡೆಸಲಿ ಎಂಬ ಸದುದ್ದೇಶದಿಂದ ಅನೇಕ ತ್ಯಾಗಗಳನ್ನು ಅವರು ಮಾಡಿದ್ದಾರೆ. ಶೈಕ್ಷಣಿಕ ಸೌಲಭ್ಯವಿಲ್ಲದ ವೇಳೆ ತಮ್ಮದೇಯಾದ ಬುದ್ದಿವಂತಿಕೆಯಿಂದ ಸಮಾಜದಲ್ಲಿ ಪರಿವರ್ತನೆ ತಂದಿದ್ದಾರೆ ಎಂದರು.
ಇದೇ ಸಂದರ್ಭ ಅವರು ಕಂದಾಯ ಇಲಾಖೆಯಿಂದ ಗ್ರಾಮೀಣ ಭಾಗದ ಅನೇಕ ಹಿರಿಯರಿಗೆ ಮಂಜೂರಾದ ವಿಧಾನವೇತನ, ವೃದ್ದಾಪ್ಯವೇತನ ಮುಂತಾದ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಿರಿಯರಿಗೆ ಗೌರವ ಕೊಡಬೇಕು. ಯಾವ ವ್ಯಕ್ತಿ ಹಿರಿಯರಿಗೆ ಅಗೌರವ ಉಂಟು ಮಾಡುತ್ತಾನೋ ಅಂತಹ ವ್ಯಕ್ತಿಯನ್ನು ಎಲ್ಲರೂ ಸೇರಿ ದೂರವಿಡಬೇಕಾಗುತ್ತದೆ. ಹಿರಿಯ ನಾಗರಿಕರು ಸಮಾಜದ ಆಸ್ತಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಳಕು ನಾಡಕಚೇರಿ ಉಪತಹಸೀಲ್ದಾರ್ ಮಹಮ್ಮದ್ ರಫೀ, ಹಿರಿಯರ ಸೇವೆಯ ಬಗ್ಗೆ ಕಂದಾಯ ಇಲಾಖೆಗೆ ಅಪಾರ ಗೌರವವಿದೆ ಎಂದರು.ತಹಸೀಲ್ದಾರ್ ಪರವಾಗಿ ಅಧ್ಯಕ್ಷತೆ ವಹಿಸಿದ್ದ ಗಿರೀಶ್ ಮಾತನಾಡಿ, ಹಿರಿಯರ ಬಗ್ಗೆ ಉದಾಸೀನ, ಅಸಡ್ಡೆ ಸರಿಯಲ್ಲ. ನಾವೆಲ್ಲರೂ ಹಿರಿಯರ ಆದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳೋಣವೆಂದರು.
೨೦ಸಿಎಲ್ಕೆ೧
ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಆರ್. ಹೇಮಾ ಉದ್ಘಾಟಿಸಿ ಮಾತನಾಡಿದರು.