ವೃತ್ತಿ ಧರ್ಮ ಪಾಲನೆ ಕರ್ತವ್ಯ: ನ್ಯಾ. ಎಸ್. ಅಬ್ದುಲ್ ನಝೀರ್

KannadaprabhaNewsNetwork |  
Published : May 10, 2026, 02:30 AM IST
ಹೇಳಿದರು. | Kannada Prabha

ಸಾರಾಂಶ

ಜೀವನ, ವೃತ್ತಿಯಲ್ಲಿ ಧರ್ಮ ಪಾಲನೆ ಮೊದಲ ಕರ್ತವ್ಯವಾಗಿರಬೇಕು. ಒಳ್ಳೆಯದರ ರಕ್ಷಣೆಗಾಗಿ ಕೆಟ್ಟದ್ದು ನಶಿಸಬೇಕಾಗಿರುವುದು ಅನಿವಾರ್ಯ. ನಾವು ಧರ್ಮ ಪಾಲಿಸಿದರೆ ಅದೇ ನಮ್ಮನ್ನು ರಕ್ಷಿಸುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.

ಪುತ್ತೂರು: ಜೀವನ, ವೃತ್ತಿಯಲ್ಲಿ ಧರ್ಮ ಪಾಲನೆ ಮೊದಲ ಕರ್ತವ್ಯವಾಗಿರಬೇಕು. ಒಳ್ಳೆಯದರ ರಕ್ಷಣೆಗಾಗಿ ಕೆಟ್ಟದ್ದು ನಶಿಸಬೇಕಾಗಿರುವುದು ಅನಿವಾರ್ಯ. ನಾವು ಧರ್ಮ ಪಾಲಿಸಿದರೆ ಅದೇ ನಮ್ಮನ್ನು ರಕ್ಷಿಸುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.ಇಲ್ಲಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತದಲ್ಲಿ ಧರ್ಮಪಾಲನೆ ಮಾಡಿದವರು ಗೆಲುವನ್ನೇ ಸಾಧಿಸಿದ್ದಾರೆ ಎನ್ನುವುದನ್ನು ಉಲ್ಲೇಖಿಸಿದರು.

ಶಿಕ್ಷಣ ಮೆದುಳಿಗೆ ತರಬೇತಿಯನ್ನು ನೀಡಬೇಕೇ ವಿನಃ ಒತ್ತಡವನ್ನು ಹೇರಬಾರದು ಎಂದು ಸ್ವಾಮಿ ವಿವೇಕಾನಂದರು ಶಿಕ್ಷಣದ ಕುರಿತು ವಿಶ್ಲೇಷಿಸಿದ್ದಾರೆ. ವೇದಗಳು ನ್ಯಾಯಾಂಗದ ಮುಖ್ಯ ಆಧಾರ. ವೇದಗಳು ನ್ಯಾಯಾಂಗಕ್ಕೆ ಶ್ರುತಿ ಇದ್ದಂತೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಗುಣಮಟ್ಟ ಹಾಗೂ ಪ್ರಗತಿಯ ಕಾರಣಕ್ಕೆ ಯುವ ನ್ಯಾಯವಾದಿಗಳಿಗೆ ಅಣಕು ನ್ಯಾಯಾಲಯದಂತಹ ವ್ಯವಸ್ಥೆ ಅಗತ್ಯ. ಇದು ಥಿಯರಿ ಹಾಗೂ ಪ್ರಾಕ್ಟಿಕಲ್ ನಡುವಿನ ಗ್ಯಾಪ್‌ನ್ನು ಭರ್ತಿ ಮಾಡುತ್ತದೆ. ಮಾತಿನ ಚಾಕಚಕ್ಯತೆ, ನ್ಯಾಯಾಧೀಶರ ಪ್ರಶ್ನೆಗಳಿಗೆ ಪರಿಣಾಮಾತ್ಮಕ ಉತ್ತರ ನೀಡಲು ಕಲಿಕೆಯಾಗುತ್ತದೆ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಮಾತನಾಡಿ, ವಿವೇಕಾನಂದರ ಹೆಸರಿನ ಶಿಕ್ಷಣ ಸಂಸ್ಥೆ ನೀಡುತ್ತಿರುವ ಶಿಕ್ಷಣದ ಸೇವೆ ಅನನ್ಯ. ಈಗ ಹಮ್ಮಿಕೊಂಡಿರುವ ಅಣಕು ನ್ಯಾಯಾಲಯ ಸ್ಪರ್ಧೆಯು ಯುವ ವಕೀಲರಿಗೆ ಪ್ರೇರಣೆ ತುಂಬುವ ಜತೆಗೆ ಕೌಶಲ್ಯ ವರ್ಧನೆಗೆ ಸಹಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಹಲವರಿಗೆ ಕಾನೂನು ಅರಿವು ಇರುವುದಿಲ್ಲ. ಆದರೆ ಕಾನೂನು ತಿಳಿದುಕೊಂಡಿರುವುದು ಸಾಮಾಜಿಕ ಜವಾಬ್ದಾರಿ. ಕಾನೂನು ವಿದ್ಯಾರ್ಥಿಗಳು ಕಾನೂನು ಅರಿವಿನ ಜಾಗೃತಿ ಮಾಡಬೇಕು. ಎಲ್ಲಾ ರೀತಿಯ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕಾನೂನಿನಿಂದ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿ ನಿರ್ಮಾಣ, ವ್ಯಕ್ತಿಯಿಂದ ರಾಷ್ಟ್ರ ನಿರ್ಮಾಣ ಈ ವಿದ್ಯಾಸಂಸ್ಥೆಯ ಕನಸು. ಇದೇ ಹಾದಿಯಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನೂ ಬಲಪಡಿಸುವ ಭಾಗವಾಗಿ ಆಯೋಜಿಸಿರುವ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ನ್ಯಾಯಾಂಗ ಕ್ಷೇತ್ರದ ಗಣ್ಯರು ಪಾಲ್ಗೊಂಡಿರುವುದು ಕಾಲೇಜಿಗೆ ಅವಿಸ್ಮರಣೀಯ ಕ್ಷಣ ಎಂದರು.‘ಲೀಗಲ್ ಸೆಕ್ಷನ್‌’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶೇಖರ್ ಜಿ. ದೇವಸ, ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ, ವಿವೇಕಾನಂದ ಕಾನೂನು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಪಿ.ಕೆ. ರವೀಂದ್ರ ಇದ್ದರು.

ಪ್ರಾಂಶುಪಾಲೆ ಡಾ. ಅಕ್ಷತಾ ಎ.ಪಿ. ಸ್ವಾಗತಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ವಂದಿಸಿದರು. ದಿವ್ಯಾ ದಾಸ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛ ಕುಶಾಲನಗರ ಕಾರ್ಯಕ್ರಮ ಮಾದರಿ: ಟಿ.ಕೆ.ರಾಮಕೃಷ್ಣ ಮೆಚ್ಚುಗೆ
ಹಿರಿಯ ಪತ್ರಕರ್ತ ಚಿ.ನಾ.ಸೋಮೇಶ್‌ಗೆ ಸನ್ಮಾನ