ಕನ್ನಡಪ್ರಭ ವಾರ್ತೆ ಬೆಳಗಾವಿಭೂಮಿ ನಮ್ಮ ಎಲ್ಲ ಜೀವಿಗಳ ಏಕೈಕ ಮನೆಯಾಗಿದೆ ಎಂದು ಸರ್ವಲೋಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಿ, ಸಸಿ ನೆಟ್ಟು ಮಾತನಾಡಿದ ಅವರು, ಇಡೀ ಜಗತ್ತು ವಿಶ್ವ ಪರಿಸರ ದಿನ ಆಚರಿಸುತ್ತಿದೆ. 50 ವರ್ಷಗಳ ಹಿಂದೆ ಒಂದೇ ಭೂಮಿ ಎಂಬ ಘೋಷಣೆಯೊಂದಿಗೆ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 5 ದಶಕಗಳ ನಂತರವೂ ಆ ಮಾತು ಹಾಗೆ ಇದೆ ಎಂದರು.ನಾವೆಲ್ಲರೂ ಮಕ್ಕಳೊಂದಿಗೆ ಅಥವಾ ನಿಮ್ಮ ಪ್ರದೇಶದ ಜನರೊಂದಿಗೆ ಮಾತನಾಡುವ ಮೂಲಕ ನೀವು ಸಣ್ಣ ಮಟ್ಟದಲ್ಲಿ ಪರಿಸರ ದಿನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯೆ ಪೂಜಾ ಪಾಟ್ಕರ್, ಗಣೇಶ ಕರಲೇಕರ್, ಬಲರಾಮ ಕಣಬರಕರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
-ವೀರೇಶ ಬಸಯ್ಯ ಹಿರೇಮಠ,
ಸರ್ವಲೋಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು.