ಕನ್ನಡಪ್ರಭ ವಾರ್ತೆ ಹೊಸಪೇಟೆ
ಸಿರಿಧಾನ್ಯ ಹಬ್ಬದ ಪ್ರಯುಕ್ತ ಕೃಷಿ ಇಲಾಖೆ, ಕೃಷಿ ತಜ್ಞರ ಸಂಸ್ಥೆಯಿಂದ ನಗರದಲ್ಲಿ ಬುಧವಾರ ನಡೆದ ನಮ್ಮ ನಡಿಗೆ ಸಿರಿಧಾನ್ಯದ ಕಡೆ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದ್ಯ ಹಲವು ರೋಗಗಳು ಜನರನ್ನು ಬಾಧಿಸುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಬೇಕಾದ ಪೌಷ್ಟಿಕ ಆಹಾರದ ಕುರಿತು ಜನರಲ್ಲಿ ಅರಿವು ಮೂಡಿಸಲು ಇಂತಹ ಆಹಾರ ಮೇಳಗಳು ಹೆಚ್ಚು ಉಪಯುಕ್ತ. ಜನರು ಬಳಸುವ ಅಕ್ಕಿಗಿಂತ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಎಂಬುದು ಈಗ ಸಿದ್ಧಗೊಂಡಿದ್ದು, ಇಲ್ಲಿನ ಜನತೆಯೂ ಆರೋಗ್ಯಪೂರ್ಣ ಬದುಕಿಗೆ ಸಿರಿಧಾನ್ಯಗಳನ್ನು ಅಧಿಕವಾಗಿ ಬಳಸುವಂತೆ ಪ್ರೇರೇಪಿಸಬೇಕಾದ ಅಗತ್ಯವಿದೆ ಎಂದರು.ಸಿರಿಧಾನ್ಯಗಳಿಂದ ಅತಿ ಕಡಿಮೆ ಪ್ರಮಾಣದ ಸಕ್ಕರೆ ಅಂಶ ರಕ್ತಕ್ಕೆ ಸೇರ್ಪಡೆಗೊಳ್ಳುವ ಕಾರಣ, ಮಧುಮೇಹದಂತಹ ಕಾಯಿಲೆ ಇದರಲ್ಲಿ ನಿಯಂತ್ರಿಸಲ್ಪಡುತ್ತದೆ. ಸಿರಿಧಾನ್ಯಗಳು ಎಲ್ಲ ಹವಾಗುಣಕ್ಕೂ ಹೊಂದಿಕೊಂಡು, ಪ್ರತಿಕೂಲ ವಾತಾವರಣದಲ್ಲೂ ಸುಲಭದಲ್ಲಿ ಬೆಳೆಯುವುದರಿಂದ ಜಿಲ್ಲೆಯಲ್ಲಿ ನವಣೆ, ಉದಲು, ಸಾಮೆ, ರಾಗಿ, ಸಜ್ಜೆ ಮುಂತಾದವುಗಳನ್ನು ಬೆಳೆಸಲು ಇಲ್ಲಿನ ರೈತರಿಗೆ ಪ್ರೋತ್ಸಾಹಿಸಬೇಕು ಎಂದರು.
ಪಾಕ ಸ್ಪರ್ಧೆಯಲ್ಲಿ 29 ಮಹಿಳೆಯರು ಭಾಗವಹಿಸಿ 90 ನಿಮಿಷದಲ್ಲಿ ಪಾಯಸ, ಶಾಮ್ಯ ಪಾಯಸ, ಉದಲು ಕಟ್ಲೇಟ್, ಸಿರಿಧಾನ್ಯ ರೊಟ್ಟಿ, ಟೊಮೇಟೊ ಬಾತ್, ಮಿಲೆಟ್ ಮಲಾಯಿ, ನವಣಕ್ಕಿ ಬಿಸಿಬೇಳೆಬಾತ್, ರಾಗಿ ದೋಸೆ, ಸಾಮೇಕ್ಕಿ ಪೊಂಗಲ್ ಸೇರಿ ಇತರೆ ರುಚಿಕರವಾದ ಖಾದ್ಯಗಳನ್ನು ಸಿದ್ಧಪಡಿಸಿದರು.
ಕೃಷಿ ಉಪನಿರ್ದೇಶಕ ನಯಿಂಬಾಷಾ, ಎಡಿ ವಾಮದೇವ ಕೊಳ್ಳಿ, ಗೃಹ ವಿಜ್ಞಾನಿ ಡಾ. ಸುನೀತಾ, ಕೃಷಿ ಅಧಿಕಾರಿಗಳಾದ ಪ್ರಿಯಾಂಕ, ರಾಜು ಮತ್ತಿತರರಿದ್ದರು.