ಹಾನಗಲ್ಲ: ಕಲಿಕೆಯಲ್ಲಿ ಹಿಂದುಳಿದ ಬಡ ಮಕ್ಕಳಿಗೆ ಕಲಿಕೆಗೆ ಪೂರಕವಾಗುವಂತೆ ಗ್ರಾಮಗಳಲ್ಲಿ ಕಲಿಕಾ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಕಾಳಜಿಯಿಂದ ಶಿಕ್ಷಣ ನೀಡುವ ಯೋಜನೆಯನ್ನು ರೋಶನಿ ಸಮಾಜಸೇವಾ ಸಂಸ್ಥೆ ಆರಂಭಿಸಿದ್ದು, ಈಗ 6 ಹಳ್ಳಿಗಳಲ್ಲಿ ಯೋಜನೆ ಜಾರಿಯಲ್ಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.
ಮುಖ್ಯೋಪಾಧ್ಯಾಯ ಎಂ.ಎಸ್. ಬಡಿಗೇರ ಮಾತನಾಡಿ, ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ನೀಡಿ ಕಲಿಕೆ ಸುಧಾರಿಸಲಾಗುತ್ತಿದೆ. ಇದಕ್ಕೆ ಪಾಲಕ ಸಹಕಾರವೂ ಬೇಕು. ಶಾಲೆಗಳು ಮಕ್ಕಳಿಗೆ ಉತ್ತಮ ವಾತಾವರಣ ನೀಡಿ ಕಲಿಕೆ ಉನ್ನತಗೊಳಿಸುತ್ತಿವೆ. ಮನೆಯಲ್ಲಿಯೂ ಉತ್ತಮ ಕಲಿಕಾ ವಾತಾವರಣ ಮಕ್ಕಳಿಗೆ ನೀಡಬೇಕು ಎಂದರು.
ಪಿಡಿಒ ರೇಣುಕಾದೇವಗಿರಿ ಮಾತನಾಡಿ, ನಾವು ಎಲ್ಲರೂ ಜ್ಞಾನ ಎಂಬ ಭಂಡಾರವನ್ನು ತಿಳಿದುಕೊಂಡರೆ ಅನೇಕ ಕಾನೂನುಗಳನ್ನು ತಿಳಿದುಕೊಂಡು ಅನೇಕರ ಬದುಕಿಗೆ ನಾವು ದಾರಿದೀಪವಾಗಬಹುದು. ಗ್ರಾಮ ಪಂಚಾಯಿತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲೂ ನಾವು ಸಿದ್ಧರಿದ್ದೇವೆ ಎಂದರುಜನವೇದಿಕೆ ನಾಯಕರಾದ ಫಕ್ಕೀರಪ್ಪ ಬಾಳೂರ, ಮಂಗಳಾ ಬೆಣ್ಣೆ, ಗಾಯಿತ್ರಿ ಚೋಟಣ್ಣನವರ, ದೀಪ ಈಳಿಗೇರ, ಹಿರಿಯಾರದ ಲಕ್ಷ್ಮಣ ವಾಲಿಕಾರ, ಜಗದಿಶ ಭಜಂತ್ರಿ, ಸಂಗಪ್ಪ ಗುಂಡೂರು, ಬಸವರಾಜ ಕರಿಬೀಮಣ್ಣನವರ, ರೋಶನಿ ಸಂಸ್ಥೆಯ ಸಂಯೋಜಕರಾದ ನಿರ್ಮಲಾ ಮಡಿವಾಳರ, ಎಸ್.ವಿ. ಪಾಟೀಲ, ಪೂಣಿಮಾ ತೋಟಣ್ಣನವರ, ಡಿಗ್ಗಪ್ಪ ಲಮಾಣಿ, ಪ್ರಕಾಶ ಆಡೂರ ಇದ್ದರು.