ಬದುಕನ್ನು ರಕ್ಷಿಸಿಕೊಳ್ಳಲು ಶಿಕ್ಷಣ ಬೇಕು: ಪ.ಗು.ಸಿದ್ದಾಪು ರ

KannadaprabhaNewsNetwork |  
Published : Feb 25, 2024, 01:46 AM IST
ಕೊಲ್ಹಾರ ತಾಲೂಕಿನ ಕುಪಕಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 8 ನೇ ವರ್ಗದ ಬೀಳ್ಕೋಡುವ ಸಮಾರಂಭ ,ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಮಾತನಾಡುತ್ತಿರುವುದು.ಈ ವೇಳೆ ಅನೇಕರು ಇದ್ದ್ರರು. | Kannada Prabha

ಸಾರಾಂಶ

ಕೊಲ್ಹಾರ ಬದುಕು ಎಂಬುದು ಬಂಗಾರವಿದ್ದಂತೆ, ಆ ಬಂಗಾರದ ಬದುಕನ್ನು ರಕ್ಷಣೆ ಮಾಡಿಕೊಳ್ಳಲು ಶಿಕ್ಷಣ ಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ಕೊಲ್ಹಾರ ಬದುಕು ಎಂಬುದು ಬಂಗಾರವಿದ್ದಂತೆ, ಆ ಬಂಗಾರದ ಬದುಕನ್ನು ರಕ್ಷಣೆ ಮಾಡಿಕೊಳ್ಳಲು ಶಿಕ್ಷಣ ಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅಭಿಪ್ರಾಯ ಪಟ್ಟರು.

ತಾಲೂಕಿನ ಕುಪಕಡ್ಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು. ಬದುಕಿಗೆ ಇಂದು ಶಿಕ್ಷಣ ಬಹಳ ಅವಶ್ಯ. ಶಿಕ್ಷಣದ ಜೊತೆಗೆ ಸಂಸ್ಕಾರವಿರಬೇಕು. ಪಾಲಕರು ಮಕ್ಕಳಿಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವಂತೆ ವೈದ್ಯ, ಎಂಜನೀಯರ್ ಆಗಬೇಕು ಎಂದು ಒತ್ತಡ ಹಾಕುತ್ತಾರೆ. ಆದರೆ, ಯಾರೊಬ್ಬರು ನೀನೊಬ್ಬ ಒಳ್ಳೆಯ ಸಂಸ್ಕಾರಯುತ ವ್ಯಕ್ತಿಯಾಗು ಅಂತ ಯಾರು ಹೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೋಣಿಹಾಳ ಗ್ರಾಪಂ ಉಪಾಧ್ಯಕ್ಷ ಗುರುನಗೌಡ ಬಿರಾದಾರ ಮಾತನಾಡಿ, ಮಗುವಿಗೆ ಮೊದಲ ಪಾಠ ಶಾಲೆ ಮನೆ. ಅಲ್ಲಿ ತಾಯಿ ಗುರುವಾಗಿದ್ದರೆ,ನಂತರ ಮಗುವಿಗೆ ಎರಡನೇ ಪಾಠ ಶಾಲೆಯೇ ಆತ ಕಲಿಯುವ ಶಾಲೆ. ಅಲ್ಲಿ ಶಿಕ್ಷಕರು ಇರುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಪ.ಗು.ಸಿದ್ದಾಪುರ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಾಲಗೊಂಡ ಅವರನ್ನು ಸನ್ಮಾನಿಸಲಾಯಿತು. 8ನೇ ತರಗತಿ ಮಕ್ಕಳಿಗೆ ಬಿಳ್ಕೋಡಲಾಯಿತು.

ಬಬಲಾದಿ ಮಠದ ಅಡಿವಯ್ಯ ಹಿರೇಮಠ, ಮುಕ್ಕಣ್ಣ ಹಿರೇಮಠ ಸಾನಿಧ್ಯ ವಹಿಸಿದ್ದರು. ಮುರಗೇಶ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕುಮಾರಗೌಡ ಪಾಟೀಲ, ಸಂಗನಗೌಡ ಬಿರಾದಾರ, ಗುರುನಗೌಡ ಬಿರಾದಾರ, ಉದಯಕುಮಾರ ಹಳ್ಳಿ, ಈಶ್ವರ ಕೊಲ್ಹಾರ, ರಾವುಸಾಬ ಬೀಳಗಿ, ಐ.ಡಿ.ಹಳ್ಳಿ, ಪ್ರಕಾಶ ಉಗ್ರಾಣ, ಸಂಗಮೇಶ ಉಗ್ರಾಣ, ಶಿವಾನಂದ ಬಿರಾದಾರ, ಶ್ರೀಮಂತ ಇಂಡಿ, ದುಂಡಪ್ಪ ಕೊಣ್ಣುರ, ಸಂಗಪ್ಪ ಕೊರ್ತಿ, ಸಿದ್ದನಗೌಡ ಬಿರಾದಾರ, ಶಿವಾನಂದ ಹಾರಿನವರ, ಸಂಗಮೇಶ ಉಗ್ರಾಣ, ಮುಖ್ಯ ಶಿಕ್ಷಕ ಸಿದ್ದು ಕೊಟ್ಯಾಳ, ಎಸ್.ಗಣಿಯವರ, ಶಿವಾನಂದ ಮಡಿಕೇಶ್ವರ, ಜಿ.ಐ.ಗೊಡ್ಯಾಳ, ಎಸ್.ಜಿ.ಪಾರಗೊಂಡ, ಜಗದೀಶ ಸಾಲಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?