ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಕುವೆಂಪು ಸಭಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಿಂದ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಅಂಕದ ಹಿಂದೆ ಹೋಗದೆ ಮೌಲ್ಯಾಧಾರಿತ ಜೀವನ ಶಿಕ್ಷಣದ ಕಡೆಗೂ ಒತ್ತು ನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಲು ಪೋಷಕರು ಮುಂದಾಗಬೇಕು ಎಂದರು.ಗ್ರಾಪಂ ಮಾಜಿ ಸದಸ್ಯೆ ಅನುಪಮ ಸತೀಶ್ ಮಾತನಾಡಿ, ಬಾಲ್ಯ ಶಿಕ್ಷಣ ಮಗು ಮತ್ತು ಜೀವನದ ತಳಹದಿಯಾಗಿರುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಅಂಕಗಳಿಗೆ ಕೊಡುವ ಆದ್ಯತೆಯಷ್ಟೇ ಗ್ರಾಮೀಣ ಭಾಗದ ಕ್ರೀಡೆ, ಸಮಾಜದ ನಡೆ-ನುಡಿ ಸಂಸ್ಕೃತಿಯತ್ತ ಹೆಜ್ಜೆ ಹಾಕುವಂತೆ ಮನವಿ ಮಾಡಿದರು.
ಈ ವೇಳೆ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಗ್ರಾಪಂ ಮಾಜಿ ಸದಸ್ಯೆ ಅನುಪಮ ಸತೀಶ್, ಎ.ಸಿ.ಮಾನಸ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಾಲೆ ಮುಖ್ಯಶಿಕ್ಷಕ ಎಚ್.ಪಿ.ಪ್ರತಿಮಾ, ಸಹಶಿಕ್ಷಕರಾದ ಸಿಂಧೂ, ರೇಖಾ, ಸುರಭಿ, ನಯನ, ರೇವಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು, ನಂದ ಸೇರಿದಂತೆ ಹಲವರಿದ್ದರು.