ಹುಬ್ಬಳ್ಳಿ:
ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 12ನೇ ಮೇ ಸಾಹಿತ್ಯ ಮೇಳದ ಗೋಷ್ಠಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸಂವಿಧಾನ ನಾಶ ಮಾಡುವ ಹುನ್ನಾರ ಯಶಸ್ವಿಯಾಗಿ ಮಾಡುತ್ತ ಬಂದಿವೆ. ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಅವರಿಂದ ಅಪಾಯ ಎದುರಾಗಿದೆ. ಸಂಸದೀಯ ವ್ಯವಸ್ಥೆಯ ಅಡಿಯಲ್ಲಿರುವ ಹಕ್ಕನ್ನು ಒಂದೊಂದಾಗಿ ನಾಶ ಮಾಡುತ್ತ ಬಂದಿದ್ದಾರೆ. ಸಮಾನತೆ ಬಯಸುವ ವಿಚಾರಧಾರೆ ಉಳ್ಳವರು ಮೇ ಸಾಹಿತ್ಯ ಮೇಳ ಆಯೋಜಿಸುತ್ತ ಬಂದಿರುವುದು ಶ್ಲಾಘನೀಯ. ಇಂಥ ಮೇಳ ರಾಷ್ಟ್ರಮಟ್ಟದಲ್ಲಿಯೂ ಆಯೋಜನೆಯಾಗುವುದು ಅತ್ಯವಶ್ಯವಾಗಿದೆ ಎಂದರು.ದಿಕ್ಸೂಚಿ ಭಾಷಣ ಮಾಡಿದ ತೆಲುಗು ಸಾಹಿತಿ ಪಾಣಿ, ಹೋರಾಟವೇ ನಮ್ಮ ಪರಿಭಾಷೆಯಾಗಿದೆ. ಚೈತನ್ಯಶೀಲ ಸಮಾಜವನ್ನು ಪುನಶ್ಚೇತನ ಮಾಡುವುದು ಪ್ರತಿಯೊಬ್ಬ ಬರಹಗಾರನ ಕರ್ತವ್ಯವಾಗಿದೆ. ನಿರಂಕುಶ ಪ್ರಭುತ್ವವಾದಿಗಳು ಜಾತಿ, ಜಾತಿಗಳ ಮಧ್ಯೆ ಒಡಕು ಸೃಷ್ಟಿಸಿ ಅಮಾಯಕರನ್ನು ಛೂ ಬಿಡುತ್ತಿದ್ದಾರೆ. ಸಾಂಸ್ಕೃತಿಕ ಅಸ್ತ್ರವನ್ನು ಬಳಸಿಕೊಳ್ಳುತ್ತ ಸಮಾಜದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಭಾರತವನ್ನು ಛಿದ್ರವಾಗಲು ಬಿಡದೆ, ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.
ಇದೇ ವೇಳೆ ಹುಬ್ಬಳ್ಳಿ ಘೋಷಣೆ ಮತ್ತು ಸಾಹಿತಿ ಪಾಣಿ ಅವರ ಕಾದಂಬರಿ ''''ಶಿಕಾರಿ'''' ಬಿಡುಗಡೆಗೊಳಿಸಲಾಯಿತು.
ವಿವಿಧ ಗೋಷ್ಠಿಗಳು:
ಪ್ರಕಾಶಕ ಬಸವರಾಜ ಸೂಳಿಭಾವಿ, ಬಿ.ಎಸ್. ಸೊಪ್ಪಿನ, ಬೀಬಿಜಾನ್ ಮುಲ್ಲಾ, ಲಿನೆಟ್ ಡಿಸಿಲ್ವ, ಅನ್ವರ ಮುಧೋಳ, ಡಾ. ಲಿಂಗರಾಜ ಅಂಗಡಿ, ಮಹೇಶ ಪತ್ತಾರ, ಗುರುನಾಥ ಉಳ್ಳಿಕಾಶಿ, ವಿ.ಬಿ. ಮಾಗನೂರ, ಶರೀಫ್ ಬಿಳೆಯಲಿ ಸೇರಿದಂತೆ ಹಲವರಿದ್ದರು.ಶರಣರ ಮೂಲ ತತ್ವ, ವಚನಗಳಿಗೆ ಅವಮಾನ
ಜನರ ಮುಂದೆ ಹುಟ್ಟಿರುವ ಸಂವಿಧಾನ ನಮ್ಮದಾಗಿದ್ದು, ಅದರ ರಹದಾರಿ ಮುಚ್ಚುವ ಕೆಲಸ ನಡೆಯುತ್ತಿದೆ. ಅದನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಮುಂದಾಗಬೇಕು. ನಮ್ಮ ಶತ್ರು ಯಾರು, ಮಿತ್ರರು ಯಾರು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ತಿಳಿಸಿದ್ದಾರೆ. ಆದರೆ, ಮನುವಾದಿಗಳು ನಮ್ಮನ್ನು ನಾವಿದ್ದ ಜಾಗದಲ್ಲೇ ಜೈಲು ಕೈದಿಯನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮಗೆ ಆಕ್ರೋಶ ಮತ್ತು ಕೋಪ ಬರದಿದ್ದರೆ ಅವರು ಕೊಟ್ಟಿದ್ದನ್ನು ಒಪ್ಪಿಕೊಂಡಂತೆಯೇ. ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.