ಗಂಗಾವತಿ: ನಗರದಲ್ಲಿ ಭವ್ಯ ಕಲಾ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಹಾಸ್ಯ ಲೋಕ ಸಂಘಟನೆಯ ಅಧ್ಯಕ್ಷ, ಪತ್ರಕರ್ತ ಎಸ್.ಎಂ. ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಸೋಮನಾಥ ಪಟ್ಟಣಶೆಟ್ಟಿ, ಸುವರ್ಣ ಸಾಧಕಿ ಪುರಸ್ಕೃತೆ ಡಾ. ಸಿ. ಮಹಾಲಕ್ಷ್ಮೀ ಕೇಸರಹಟ್ಟಿ, ಕಲಾವಿದ ಕಾಸಿಂ ಅಲಿ ಮುದ್ದಾಬಳ್ಳಿ, ಗಾಯಕ ಖಾಜವಲಿ, ಮಂಜುನಾಥ ಹೊಸಕೇರಾ ಅವರನ್ನು ಸನ್ಮಾನಿಸಲಾಯಿತು.
ಹಾಸ್ಯ ಲೋಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ. ಪರಶುರಾಮಪ್ರಿಯ ಅವರು 17 ವರ್ಷಗಳಿಂದ ನಡೆಯುತ್ತ ಬಂದಿರುವ ಹಾಸ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಆನಂತರ ಜ್ಯೂ. ವಿಷ್ಣುವರ್ಧನ ಅವರಿಂದ ನೃತ್ಯರೂಪಕ ನಡೆಯಿತು. ಈ ವೇಳೆ ಹಾಸ್ಯ ಸಾಹಿತಿ ಬಿ. ಪ್ರಾಣೇಶ, ಇಂದುಮತಿ ಸಾಲಿಮಠ, ಡಾ. ಬಸವರಾಜ ಬೆಣ್ಣೆ, ಚಿದಾನಂದ ಕೀರ್ತಿ ಅವರಿಂದ ಹಾಸ್ಯ ಸಂಜೆ ಜರುಗಿತು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯಸ್ವಾಮಿ, ಬಿಜೆಪಿ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ. ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯ ವಾಸುದೇವ ನವಲಿ, ಪತ್ರಕರ್ತರಾದ ರಾಮಮೂರ್ತಿ ನವಲಿ, ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಪತ್ರಕರ್ತ ಎಂ.ಜೆ. ಶ್ರೀನಿವಾಸ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ನಾಗರಾಜ್ ಇಂಗಳಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶರಣಬಸಪ್ಪನಾಯಕ, ಚಿತ್ರ ನಟ ವಿಷ್ಣು ಜೋಷಿ, ಪಿಜಿಬಿ ಬ್ಯಾಂಕ್ ನಿವೃತ್ತ ಅಧಿಕಾರಿ ಟಿ. ಆಂಜನೇಯ, ಡಾ. ಶಿವಕುಮಾರ ಮಾಲೀಪಾಟೀಲ್, ವೆಂಕಣ್ಣ, ನಗರಸಭಾ ಸದಸ್ಯೆ ಸುನೀತಾ ಶ್ಯಾವಿ ಭಾಗವಹಿಸಿದ್ದರು.ಎಸ್.ಎಂ. ಪಟೇಲ್ ಪ್ರಾರ್ಥಿಸಿದರು, ಸಿ. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಎಂ. ಪರಶುರಾಮಪ್ರಿಯ ವಂದಿಸಿದರು.