ಸಂಭ್ರಮದ ಈದ್‌ ಮಿಲಾದ ಹಬ್ಬದಾಚರಣೆ

KannadaprabhaNewsNetwork |  
Published : Sep 06, 2025, 01:01 AM IST
5ಡಿಡಬ್ಲೂಡಿ6ಈದ್‌ ಮಿಲಾದ ಹಬ್ಬದ ಅಂಗವಾಗಿ ಧಾರವಾಡದಲ್ಲಿ ಮುಸ್ಲಿಂ ಬಂಧುಗಳು ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ಮೆರವಣಿಗೆಯಲ್ಲಿ ಗದ್ದಲ-ಗೊಂದಲ ಆಗದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್‌

ಧಾರವಾಡ: ಮೊಹಮ್ಮದ ಪೈಗಂಬರ ಜನ್ಮದಿನ ಹಿನ್ನೆಲೆಯಲ್ಲಿ ಶುಕ್ರವಾರ ಈದ್‌ ಮಿಲಾದ ಹಬ್ಬ ಸಂಭ್ರಮದಿಂದ ಧಾರವಾಡದಲ್ಲಿ ಜರುಗಿತು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಮೆರವಣಿಗೆ ಮಾಡುವುದು ಸಹ ಆಚರಣೆಯ ಭಾಗ. ಆದ್ದರಿಂದ ಧಾರವಾಡದ ಮುಸ್ಲಿಂ ಬಂಧುಗಳು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡಿದರು. ಸಮಾಜದ ಮುಖಂಡರುಗಳು, ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸಿದ್ದವು. ವಾಹನ ಹಾಗೂ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಈದ್ ಮೀಲಾದ್ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಸಿಹಿ ತಿಂಡಿ ವಿತರಿಸಲಾಯಿತು. ಮೆರವಣಿಗೆಯಲ್ಲಿ ಗದ್ದಲ-ಗೊಂದಲ ಆಗದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಸಹ ವಹಿಸಲಾಗಿತ್ತು.

ತಾಲೂಕಿನ ಮುಗದ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಂಧುಗಳು ಭಾವೈಕ್ಯತೆಯ ಪೈಗಂಬರ್ ದಿನಾಚರಣೆ ಆಚರಿಸಿದದರು. ತಾಪಂ ಮಾಜಿ ಅಧ್ಯಕ್ಷ ಕೆ.ಎಫ್‌.ಹಟ್ಟಿ, ರವಿ ಕಸಮಳಗಿ, ಎಎಸೈ ಬಾಬಾಝಾನ್ ಮುಲ್ಲಾ, ನಾಗಪ್ಪ ಕೊಂಪನ್ನವರ್, ಮಂಜುನಾಥ್ ಜಕ್ಕನವರ್, ಶೇಖಪ್ಪ ಕಲಗೌಡರ್, ಸುಬಾನ್ಸಾಬ್ ಕಳ್ಳಿಮನಿ, ಗುಡು ಸಾಬ್ ಕೋಟಿ, ಮಕ್ತುಂಸಾಬ್ ಚಪ್ಪರಮನಿ, ಮೊಹಮ್ಮದ್ ಜೋರಮ್ಮನವರ್, ರಾಜು ಮುಜಾವರ್, ಧೂಲಾ ಮಕಂದಾರ್, ಧರ್ಮ ಗುರು ಮಹಮ್ಮದ್ ರಿಜ್ವಿ ಇದ್ದರು.

ಇದೇ ಸಂದರ್ಭದಲ್ಲಿ ಅಫಘಾನಿಸ್ತಾನ ಹಾಗೂ ಸುಡಾನ್ ದಲ್ಲಿ ಆದ ಭೂಕಂಪದಲ್ಲಿ ಮೃತರಾದವರಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ