ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ದಿನದಿಂದಲೇ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಇವು ದಿನದ 24 ತಾಸುಗಳು ಕೆಲಸ ಮಾಡುತ್ತವೆ ಎಂದರು.
ಈ ಚೆಕ್ ಪೋಸ್ಟ್ಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.ಶಸ್ತ್ರಾಸ್ತ್ರ ಠೇವಣಿ ಇಡಬೇಕು:
ಸ್ಥಳೀಯ ಠಾಣೆಗಳಲ್ಲಿ ಶಸ್ತ್ರಗಳನ್ನು ಠೇವಣಿ ಮಾಡಿದ ಪರವಾನಗಿದಾರರು ಜೂ.11ರ ನಂತರ ಠಾಣಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಶಸ್ತ್ರಗಳನ್ನು ಹಿಂಪಡೆದು ಸ್ವೀಕೃತಿಯನ್ನು ನೀಡಬೇಕು ಎಂದು ತಿಳಿಸಿದರು.
ಇವರಿಗೆ ವಿನಾಯತಿ:ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ (ಬ್ಯಾಂಕ್ ಹಾಗೂ ಸೆಕ್ಯೂರಿಟಿ ಏಜೆನ್ಸಿಗಳು) ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪತ್ರಾಂಕಿತ ವರ್ಗ-1ರ ಅಧಿಕಾರಿಗಳು, ಕೊಡವ ಸಮಾಜ ಹಾಗೂ ನ್ಯಾಷನಲ್ ರೈಫಲ್ಸ್ ಆಸೋಸಿಯೇಷನ್ಸ್ ಸದಸ್ಯರಿಗೆ ಶಸ್ತ್ರಗಳ ಠೇವಣಿಯಿಂದ ವಿನಾಯತಿ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ವಿನಾಯತಿಗೆ ಡಿಸಿಪಿ ಸಂಪರ್ಕಿಸಿ:ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಶಸ್ತ್ರ ಠೇವಣಿಯಿಂದ ವಿನಾಯತಿ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ)ರವರ ಕಚೇರಿಯಲ್ಲಿ ಮಾ.25ರ ಒಳಗೆ ವಿನಾಯಿತಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾ.26ರೊಳಗೆ ಆಯುಕ್ತರ ಕಚೇರಿಯಲ್ಲಿರುವ ಪರಿಶೀಲನಾ ಸಮಿತಿಗೆ ಉಪ ಪೊಲೀಸ್ ಆಯುಕ್ತರು ಸಲ್ಲಿಸಬೇಕು ಎಂದು ತಿಳಿಸಿದರು.ಎಲ್ಲೆಲ್ಲಿ ಚೆಕ್ ಪೋಸ್ಟ್ಗಳುವಿಭಾಗಅಂತರ್ ಜಿಲ್ಲೆಜಿಲ್ಲೆಯೊಳಗೆ ಒಟ್ಟು
ಕೇಂದ್ರ01616ಪೂರ್ವ2810
ಉತ್ತರ32427ಈಶಾನ್ಯ21012
ದಕ್ಷಿಣ178ಆಗ್ನೇಯ2810
ಪಶ್ಚಿಮ3912ವೈಟ್ಫೀಲ್ಡ್257
ಒಟ್ಟು1587102