ಕನ್ನಡಪ್ರಭ ವಾರ್ತೆ ಕೋಲಾರ
ಹೊಸದಾಗಿ ರಚನೆಯಾಗಿರುವ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೂ ಸಹ ಆಡಳಿತ ಮಂಡಳಿಯಲ್ಲಿ ನಿರ್ದೇಶಕ ಸ್ಥಾನವನ್ನು ಕಲ್ಪಿಸಲಾಗುವುದು ಇದರಿಂದ ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಸೇರಲಿರುವ ಕೋಲಾರ-ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ೧೪ ತಾಲ್ಲೂಕುಗಳಿಂದ ಒಟ್ಟು ೧೮ ನಿರ್ದೇಶಕರನ್ನು ಶೇರುದಾರರ ಆಯ್ಕೆ ಮಾಡಬೇಕಿದೆ.
18 ಸ್ಥಾನಗಳಿಗೆ ಚುನಾವಣೆ:ಎರಡೂ ಜಿಲ್ಲೆಗಳಿಂದ ಟಿ.ಎ.ಪಿ.ಸಿ.ಎಂ.ಎಸ್ಗಳಿಂದ ಒಬ್ಬ ನಿರ್ದೇಶಕರು ಎರಡು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ತಲಾ ಒಬ್ಬೊಬ್ಬ ನಿರ್ದೇಶಕರು ಹಾಗೂ ಎರಡೂ ಜಿಲ್ಲೆಯ ಇನ್ನಿತರೆ ಸಹಕಾರ ಸಂಘಗಳಿಂದ ಓರ್ವ ನಿರ್ದೇಶಕರು ಸೇರಿದಂತೆ ಒಟ್ಟು ೧೮ ಮಂದಿ ನಿರ್ದೇಶಕರು ಆಡಳಿತ ಮಂಡಳಿಗೆ ಅವಕಾಶ ಕಲ್ಪಿಸಲಾಗಿದೆ.
ಮತದಾರರ ವಿವರ:
ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ೧೦೨೯ ಮಂದಿ ಮತದಾರರಿದ್ದು, ಈ ಪೈಕಿ ಅರ್ಹ ಮತದಾರರು ೪೯೫ ಮಂದಿ, ಅನರ್ಹ ಮತದಾರರು ೬೨೫ ಮಂದಿ ಇದ್ದಾರೆ. ಅನುಬಂಧ ೩ ರಲ್ಲಿ ೯ ಮಂದಿ ಮತದಾರರಿದ್ದಾರೆ, ಸರ್ಕಾರದ ನಾಮಿನಿ ನಿರ್ದೇಶಕರ ಒಬ್ಬರು , ಜೆ.ಆರ್.ಸಿ.ಎಸ್ ಇಬ್ಬರು ಹಾಗೂ ೧ ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಸೇರಿದಂತೆ ಮೂವರು ನಿರ್ದೇಶಕರಿದ್ದಾರೆ. ಹೊಸದಾಗಿ ಎರಡು ಚೇಳೂರು ಮತ್ತು ಮಂಜೇನಹಳ್ಳಿ ಎರಡು ನಿರ್ದೇಶಕ ಸ್ಥಾನಗಳನ್ನು ಸೇರ್ಪಡೆ ಮಾಡಲಾಗಿದೆ.ಮೇ ೨೮ ರಂದು ಮತದಾನದ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂದೇ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.