ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

KannadaprabhaNewsNetwork |  
Published : Aug 04, 2025, 11:45 PM IST
ಹೊನ್ನಾಳಿ ಫೋಟೋ 4ಎಚ್.ಎಲ್.ಐ1. ತಾಲ್ಲೂಕು ತರಗನಹಳ್ಳಿ ಪ್ರಾ. ಕೃ. ಪ .ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ 12 ಜನ ನೂತನ ನಿರ್ದೇಶಕರುಗಳು. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.

ಸಾಲಗಾರರ ಕ್ಷೇತ್ರದ 11 ಸ್ಥಾನಗಳ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 8 ಸ್ಥಾನಗಳಿಗೆ ಹಾಗೂ ಸಾಲಗಾರರ ಕ್ಷೇತ್ರದ 1 ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. 8 ಸ್ಥಾನಗಳ ಪೈಕಿ 5 ಸಾಮಾನ್ಯ ಕ್ಷೇತ್ರ, 2 ಮಹಿಳಾ ಮೀಸಲು ಕ್ಷೇತ್ರ, ಬ ವರ್ಗ 1 ಸ್ಥಾನಕ್ಕೆ ಒಟ್ಟು 14 ಜನ ಸ್ಪರ್ಧೆ ಮಾಡಿದ್ದರು.

ವಿಜೇತರು:

ಭಾನುವಾರ ತಡರಾತ್ರಿವರೆಗೂ ಮತ ಎಣಿಕೆ ನಡೆಯಿತು. ಟಿ. ಜಿ. ರಮೇಶ್‌ ಗೌಡ, ಎಸ್.ಜಿ. ಬಸವನಗೌಡ, ಎಸ್.ಜಿ. ವೀರಪ್ಪ ಗೌಡ, ಎನ್.ಈಶ್ವರಪ್ಪ, ವಿಶ್ವಾರಾಧ್ಯ ಅವರು ಸಾಮಾನ್ಯ ಕ್ಷೇತ್ರದಿಂದ ವಿಜೇತರಾದರು. ಮಹಿಳಾ ಮೀಸಲು ಕ್ಷೇತ್ರದಿಂದ ಮಂಜುಳಮ್ಮ ಚಿದಾನಂದಪ್ಪ, ಯಶೋಧಮ್ಮ ಸಿದ್ದಪ್ಪ ಚುನಾಯಿತರಾದರು. ಪ್ರವರ್ಗ ಬ ದಿಂದ ವಿಜಯ ಚುನಾಯಿತರಾದರು.

ಅವಿರೋಧ ಆಯ್ಕೆಯಾದವರು:

ಹಿಂದುಳಿದ ಅ ವರ್ಗದಿಂದ ಎಸ್.ಆರ್. ಲೋಕಪ್ಪ, ಪರಿಶಿಷ್ಟ ಜಾತಿಯಿಂದ ಶಾಂತನಾಯ್ಕ, ಪರಿಶಿಷ್ಟ ಪಂಗಡದಿಂದ ಟಿ. ರಾಜಪ್ಪ ಅವಿರೋಧವಾಗಿ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಇಬ್ಬರು ಸ್ಪರ್ಧೆ ಮಾಡಿದ್ದು, ಅವರ ಪೈಕಿ ಬಸವನಗೌಡ (ಸಾ) ಅವರು ಚುನಾಯಿತರಾದರು.

ಚುನಾವಣಾಧಿಕಾರಿಯಾಗಿ ವಾಸಪ್ಪ ವಾಲ್ಮೀಕಿ ಕರ್ತವ್ಯ ನಿರ್ವಹಿಸಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್, ಸಿಬ್ಬಂದಿ ಧರ್ಮಪ್ಪ ಹಾಜರಿದ್ದರು.

- - -

-4ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕು ತರಗನಹಳ್ಳಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಜನ ನಿರ್ದೇಶಕರು ಆಯ್ಕೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ