ಹೊಳೆನರಸೀಪುರ ತಾಲೂಕು ವಿತರಕರ ಸಂಘದ ಪದಾಧಿಕಾರಿಗಳ ಆಯ್ಕೆ

KannadaprabhaNewsNetwork |  
Published : Apr 05, 2026, 02:00 AM IST
3ಎಚ್ಎಸ್ಎನ್11 : ಹೊಳೆನರಸೀಪುರ ತಾ. ವಿತರಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಆರ್. ರಾಮನಾಥ್, ಉಪಾಧ್ಯಕ್ಷರಾಗಿ ರಾಮಚಂದ್ರಗುಪ್ತಾ, ಕಾರ್ಯದರ್ಶಿಯಾಗಿ ಅರುಣ್, ಖಜಾಂಜಿಯಾಗಿ ರೋಹಿತ್, ಆಯ್ಕೆಯಾದರು. ನೂತನ ತಂಡಕ್ಕೆ ಸಂಘದ ಸದಸ್ಯರು ಶುಭ ಹಾರೈಸಿದರು. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕು ವಿತರಕರ ಸಂಘದ ನೂತನ ಅಧ್ಯಕ್ಷರಾಗಿ ಬಿ. ಆರ್‌. ರಾಮನಾಥ್ ಉಪಾಧ್ಯಕ್ಷರಾಗಿ ರಾಮಚಂದ್ರ ಗುಪ್ತ, ಖಜಾಂಚಿಯಾಗಿ ರೋಹಿತ್, ಕಾರ್ಯದರ್ಶಿಯಾಗಿ ಅರುಣ್, ಸಹ ಕಾರ್ಯದರ್ಶಿಯಾಗಿ ಮಹೇಂದ್ರ ಬಾಬು, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅಶ್ವಥ್, ಜೀವನ್, ಕಾರ್ತಿಕ್ ಹಾಗೂ ವಿಶೇಷ ಆಹ್ವಾನಿತರಾಗಿ ಎಚ್. ವಿ. ಸುರೇಶ್ ಕುಮಾರ್‌ ಹಾಗೂ ಆರ್‌. ವಾಸುದೇವ್‌ ಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕು ವಿತರಕರ ಸಂಘದ ನೂತನ ಅಧ್ಯಕ್ಷರಾಗಿ ಬಿ. ಆರ್‌. ರಾಮನಾಥ್ ಉಪಾಧ್ಯಕ್ಷರಾಗಿ ರಾಮಚಂದ್ರ ಗುಪ್ತ, ಖಜಾಂಚಿಯಾಗಿ ರೋಹಿತ್, ಕಾರ್ಯದರ್ಶಿಯಾಗಿ ಅರುಣ್, ಸಹ ಕಾರ್ಯದರ್ಶಿಯಾಗಿ ಮಹೇಂದ್ರ ಬಾಬು, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅಶ್ವಥ್, ಜೀವನ್, ಕಾರ್ತಿಕ್ ಹಾಗೂ ವಿಶೇಷ ಆಹ್ವಾನಿತರಾಗಿ ಎಚ್. ವಿ. ಸುರೇಶ್ ಕುಮಾರ್‌ ಹಾಗೂ ಆರ್‌. ವಾಸುದೇವ್‌ ಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

ಬಿ. ಆರ್‌. ರಾಮನಾಥ್ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ವಿತರಕರ ಸಂಘ ಪ್ರಾರಂಭವಾದ ದಿನದಿಂದ ಕಂಪನಿಗಳಿಂದ ವಿತರಕರಿಗೆ ಆಗುತ್ತಿದ್ದ ತೊಂದರೆಗಳು ಕಡಿಮೆ ಆಗಿದೆ. ಹಿಂದೆ ಕೆಲವು ಕಂಪನಿಗಳವರು ಮೇಲಿಂದ ಮೇಲೆ ಯಾವುದೇ ಸೂಚನೆ ನೀಡದೇ ವಿತರಕರನ್ನು ಬದಲಾಯಿಸುತ್ತಿದ್ದರು. ಈಗ ಯಾವುದೇ ವಿತರಕರನ್ನು ಬದಲಿಸುವ ಮುನ್ನ ಸಂಘದ ಗಮನಕ್ಕೆ ತಂದು ಕಂಪನಿಗಾಗಲಿ, ಅಥವಾ ವಿತರಕರಿಗಾಗಲಿ ನೀಡಬೇಕಾದ ಬಾಕಿಗಳನ್ನು ಕೊಟ್ಟು ವಿತರಕರನ್ನು ಬದಲಿಸುವಂತಾಗಿದೆ. ನಮ್ಮ ಸಂಘ, ವಿತರಕರ ಹಾಗೂ ಪಟ್ಟಣದ ವರ್ತಕರ ಹಿತಕಾಯಲು ಬದ್ಧವಾಗಿದೆ. ಯಾವುದೇ ಕಂಪನಿಯರು ಏಜೆನ್ಸಿ ನೀಡಲು ಬಂದಾಗ ಸಂಘವನ್ನು ಸಂಪರ್ಕಿಸಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿ, ಪೂರ್ವಪರ ಗೊತ್ತಿಲ್ಲದೆ ತೆಗೆದುಕೊಂಡರೆ ತೊಂದರೆ ಅನುಭವಿಸುತ್ತೀರಿ ಎಂದು ಎಚ್ಚರಿಸಿ, ಕೆಲವರು ಒಂದೇ ಊರಿನಲ್ಲಿ ಇಬ್ಬರು ಮೂವರಿಗೆ ನೇಮಿಸಿ, ತೊಂದರೆ ಕೊಡುತ್ತಾರೆ, ಜಾಗೃತರಾಗಿರಿ ಎಂದರು.

ಕೆಲವು ಕಂಪನಿಯವರು ಮಿತಿ ಮೀರಿದ ಗುರಿಯನ್ನು (ಟಾರ್ಗೆಟ್) ಕೊಟ್ಟು ವಿತರಕರಿಗೆ ತೊಂದರೆ ನೀಡುತ್ತಾರೆ. ಇಂತಹ ವಿಷಯಗಳಲ್ಲಿ ನಮ್ಮ ಸಂಘ ತೆಗೆದುಕೊಳ್ಳುವ ಕೆಲವು ಕಠಿಣ ನಿರ್ಧಾರಗಳಿಂದ ನಮ್ಮ ಸಂಘ ರಾಜ್ಯದಲ್ಲೇ ಅತ್ಯುತ್ತಮ ವಿತರಕರ ಸಂಘ ಎನಿಸಿದೆ. ಸಂಘದ ಸದಸ್ಯರು ಸಂಘದ ಎಲ್ಲ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ನಮ್ಮ ಸಂಘದ ಶಕ್ತಿಯನ್ನು ಹೆಚ್ಚಿಸಿ ಎಂದರು. ನಿಕಟ ಪೂರ್ವ ಅಧ್ಯಕ್ಷ ಅಬುಲ್ ವಫಾ, ಎಚ್. ವಿ. ಸುರೇಶ್ ಕುಮಾರ್‌, ವಾಸುದೇವ ಮೂರ್ತಿ ಆರ್ ಮಾತನಾಡಿದರು.

ಮಾಜಿ ಅಧ್ಯಕ್ಷರಾದ ಸಿ. ಎನ್. ನಾಗಪ್ಪ, ರೋಹಿತ್, ಶ್ರೀನಿವಾಸ್, ಯೋಗೇಶ್, ಕಿಶೋರ್, ಶಂಕರ್‌ ನಾರಾಯಣ್, ವಿಜೇತ್ ಸದಸ್ಯರಾದ ಗೌತಮ್, ಚಂದ್ರು, ವಿಶ್ವಾಸ್, ಎಚ್. ಪಿ. ರಮೇಶ್, ರಾಘವೇಂದ್ರ, ಸುನಿಲ್, ಸಂಜು, ಆನಂದ, ಪವನ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋಗಳಿಗೆ ಹೆಚ್ಚುತ್ತಿರುವ ಎಲ್‌ಪಿಜಿ ಸಂಕಷ್ಟ
ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ 10ರಂದು ಬೃಹತ್ ಜನ ಸಮಾವೇಶ