- ಶಿಕಾರಿಪುರದ ಆರೋಪಿ ಚಿಕ್ಕಮಗಳೂರು ಜಿಲ್ಲೆ ಎಸ್.ಕೊಪ್ಪಲಲ್ಲಿ ಪೊಲೀಸರಿಗೆ ಸೆರೆಕನ್ನಡಪ್ರಭ ವಾರ್ತೆ, ದಾವಣಗೆರೆ
ಈ ಸಂಬಂಧ ಶಿಕಾರಿಪುರದ ಶಾಂತಿ ನಗರದ ಜಯಲಕ್ಷ್ಮೀ ಕಾಂಪೌಂಡ್ ವಾಸಿ ಎಸ್.ಬಿ.ಪ್ರದೀಪ ಎಂಬಾತನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅನಂತರ ಜಮೀನಿನ ಮೇಲೆ ಹೊರಬಂದ ಆರೋಪಿ ಕೋರ್ಟ್ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.2004ರ ಸೆಪ್ಟೆಂಬರ್ 27ರಂದು ನ್ಯಾಯಾಲಯ ಪ್ರಕರಣವನ್ನು ಎಲ್ಪಿಆರ್ ನಂ.60/2004ನೇ ಪ್ರಕರಣ ಎಂದು ಮಾನ್ಯ ಮಾಡಿತ್ತು.ಆರೋಪಿ ಪ್ರದೀಪ್ ಪತ್ತೆಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಮುಂದಾಗಿತ್ತು. ಪ್ರಕರಣದ 23 ವರ್ಷಗಳ ನಂತರ ಜೂ.20 ರಂದು ಶಿಕಾರಿಪುರದ ಶಾಂತಿ ನಗರಕ್ಕೆ ಪೊಲೀಸರು ಹೋಗಿ ವಿಚಾರಿಸಿದ್ದಾರೆ. ಆಗ ಆತ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಕೊಪ್ಪಲು ಗ್ರಾಮದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದಾರೆ. ಅದರಂತೆ ಆರೋಪಿ ಎಸ್.ಬಿ.ಪ್ರದೀಪನನ್ನು ಪತ್ತೆ ಮಾಡಿ, ಕರೆ ತಂದರು.
ಆರೋಪಿಯನ್ನು ಜೂ.21ರಂದು ಠಾಣೆಗೆ ಕರೆ ತಂದು, 23 ವರ್ಷಗಳ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಸ್ಪಿ ಉಮಾ ಪ್ರಶಾಂತ ಸೂಚನೆಯಂತೆ ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಎಸ್.ಬಸವರಾಜ, ಹರಿಹರ ಸಿಪಿಐ ಸುರೇಶ ಸಗರಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪಿಎಸ್ಐ ಮಂಜುನಾಥ ಕುಪ್ಪೇಲೂರು, ಸಿಬ್ಬಂದಿ ತಂಡ ಆರೋಪಿ ಪ್ರದೀಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.- - -(-ಪೋಟೋ: ಸಾಂದರ್ಭಿಕ ಚಿತ್ರ)