ಕೈಗೆಟಕುವಂತಿವೆ ವಿದ್ಯುತ್‌ ತಂತಿಗಳು: ಅನಾಹುತವಾಗುವ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ ಚೆಸ್ಕಾಂ

KannadaprabhaNewsNetwork |  
Published : Jun 03, 2025, 12:44 AM IST
2ಎಚ್ಎಸ್ಎನ್6 : ಬೇಲೂರು   ಪಟ್ಟಣದ ರಾಘವೇಂದ್ರ ಮಠದ ಮುಂಭಾಗದಲ್ಲಿ  ವಿದ್ಯುತ್ ತಂತಿಗಳು    ಜೋತ್ತು ಬಿದಿದ್ದು  ಸಾವು ನೋವು ಸಂಭವಿಸುವ ಮೊದಲು ಸೆಸ್ಕಾಂ  ಇಲಾಖೆ ಎಚ್ಚೆತ್ತು ಸರಿಪಡಿಸಬೇಕು ಎಂದು  ಸ್ಥಳೀಯ ನಾಗರೀಕರು ಒತ್ತಾಯಿಸಿದ್ದಾರೆ. | Kannada Prabha

ಸಾರಾಂಶ

ಗೃಹೋಪಯೋಗಿ ವಸ್ತುವನ್ನು ಮೇಲೆ ಎತ್ತಿಕೊಂಡು ಹೋಗುವಾಗ ವಿದ್ಯುತ್ ತಗುಲುವ ಸಾಧ್ಯತೆಗಳಿವೆ. ಆದ್ದರಿಂದ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ರಾಘವೇಂದ್ರ ಮಠದ ಮುಂಭಾಗದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಸಾವು- ನೋವು ಸಂಭವಿಸುವ ಮೊದಲು ಚೆಸ್ಕಾಂ ಎಚ್ಚೆತ್ತು ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

11ನೇ ವಾರ್ಡ್ ನಲ್ಲಿ ರಾಘವೇಂದ್ರಮಠದ ಎದುರು ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಬೀದಿ ದೀಪ ಅಳವಡಿಸಲು ಕಂಬಗಳ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳು ನೆಲ ಮಟ್ಟದಿಂದ ಕೇವಲ ಎಂಟು ಅಡಿ ಎತ್ತರವಿದ್ದು ತಂತಿ ನೆಲದ ಮೇಲೆ ಬಿದ್ದರೆ ಅಥವಾ ಮರಗಳಿಗೆ ತಾಕಿದರೆ ಸಾವು ಗ್ಯಾರಂಟಿ. ಗೃಹೋಪಯೋಗಿ ವಸ್ತುವನ್ನು ಮೇಲೆ ಎತ್ತಿಕೊಂಡು ಹೋಗುವಾಗ ವಿದ್ಯುತ್ ತಗುಲುವ ಸಾಧ್ಯತೆಗಳಿವೆ. ಆದ್ದರಿಂದ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಘವೇಂದ್ರ ಮಠದ ಎದುರು ಇರುವ ಅರಳಿ ಮರದ ಕೊಂಬೆಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ತಂತಿ ಕೆಳಕ್ಕೆ ಬಾಗುತ್ತಿವೆ. ಮತ್ತು ಗಾಳಿ, ಮಳೆ ಬಂದರೆ ತಂತಿಗಳು ಒಂದಕ್ಕೊಂದು ಸ್ಪರ್ಶವಾಗಿ ಬೆಂಕಿ ಬರುತ್ತಿದೆ. ಸೆಸ್ಕ್ ಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಅರಳಿ ಮರದ ಕೊಂಬೆಗಳನ್ನು ಕತ್ತರಿಸಿ, ಬಾಗಿರುವ ತಂತಿಗಳನ್ನು ಎತ್ತರಿಸಿ. ಶಾಶ್ವತ ಪರಿಹಾರ ನೀಡಬೇಕೆಂದು ರಾಘವೇಂದ್ರ ಮಠದ ಆರ್ಚಕ ಸುಧೀಂದ್ರ, ಸ್ಥಳೀಯ ನಾಗರಿಕರಾದ ಲಕ್ಷ್ಮೀಕಾಂತ್, ವಸಂತ, ತೇಜು, ಶಿವು ಆಗ್ರಹಿಸಿದ್ದಾರೆ.

ಸೆಸ್ಕ್ ಎಇಇ ಬಸವರಾಜು ಈ ಬಗ್ಗೆ ಮಾತನಾಡಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!