ಹುಬ್ಬಳ್ಳಿ:
ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶ್ರೀಗಜಾನನ ಮಹಾಮಂಡಳ ವತಿಯಿಂದ ಆಯೋಜಿಸಲಾಗಿದ್ದ ಹುಬ್ಬಳ್ಳಿ ಸೇವಾರತ್ನ ಪ್ರಶಸ್ತಿ ಪ್ರದಾನ, 50ಕ್ಕೂ ಹೆಚ್ಚು ಗಜಾನನ ಯುವಕ ಮಂಡಳಿಗಳಿಗೆ "ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ " ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಮಹಾಮಂಡಳದ ಅಧ್ಯಕ್ಷ ಡಿ. ರಘು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿಗಳಾದ ಮಹಾದೇವ ಕರಮರಿ, ಗೋವಿಂದ ಜೋಶಿ, ಎಚ್.ಎನ್. ನಂದಕುಮಾರ, ಡಾ. ವಿ.ಎಸ್.ವಿ. ಪ್ರಸಾದ, ಜಿ.ಕೆ. ರತ್ನಕುಮಾರ, ಗೌತಮ ಬಾಫಣಾ, ಜಿತೇಂದ್ರ ಮಜೇಥಿಯಾ, ಪೂರ್ಣಚಂದ್ರ ಘಂಟಸಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 50ಕ್ಕೂ ಅಧಿಕ ಗಜಾನನ ಯುವಕ ಮಂಡಳಿಗಳಿಗೆ ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ ಪ್ರಶಸ್ತಿ ನೀಡಲಾಯಿತು.ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ವಿಪ ಸದಸ್ಯ ಲಿಂಗರಾಜ ಪಾಟೀಲ, ಮಹಾಮಂಡಳದ ಪದಾಧಿಕಾರಿಗಳಾದ ರತ್ನ ಗಂಗಣ್ಣವರ, ಸುಮಾ ಹಿರೇಮಠ, ಗಜಾನನ ಯರಕದ, ವೆಂಕಟೇಶ ಬೊಂಗಾಳೆ, ಸಂಗೀತಾ ಬದ್ದಿ, ಪದ್ಮಾವತಿ ಬಾಗಲಕೋಟ, ಮಲ್ಲಿಕಾರ್ಜುನ ಮರ್ಲಿಂಗೌಡರ, ಚನ್ನಪ್ಪ ಸಿ ಎಂ, ಮೋಹನ ಬರುಡೆ, ವಸಂತಾ ಡಂಗನವರ, ಸಂತೋಷ ಖೋದನಪುರ, ಸಿದ್ದರಾಜ ಕುಂದಗೋಳ ಉಪಸ್ಥಿತರಿದ್ದರು. ಸುಹಾಸಿನಿ ದೇಸಾಯಿ ನಿರೂಪಿಸಿದರು. ಗಿರಿಜಾ ಹೂಗಾರ ಸ್ವಾಗತಿಸಿದರು.