ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮರೆಗುದ್ದಿಯ ನೀಲ ವಿಜಯ ಮಹಾಂತೇಶ್ವರಿ ತಾಯಿ ಮಾತನಾಡಿ, ಬಸವಣ್ಣನವರು ಅಂತರಜಾತಿ ವಿವಾಹ ಮಾಡಿಸಿ ಸಮಾಜದಲ್ಲಿದ್ದ ಜಾತಿ ತಾರತಮ್ಯದ ಅನಿಷ್ಟ ತೊಲಗಿಸಲು ಕ್ರಾಂತಿಕಾರಿ ಹೆಜ್ಜೆ ಇರಿಸಿದರು. ಇದನ್ನು ಸಹಿಸದ ಪಂಡಿತರು ಬಸವಣ್ಣನವರ ವಿರುದ್ಧ ಪಿತೂರಿ ನಡೆಸಿ ರಾಜರನ್ನು ಎತ್ತಿಕಟ್ಟಿ ಶರಣರ ನಾಶಕ್ಕೆ ಸೈನ್ಯಕ್ಕೆ ಆದೇಶಿಸಿದರು ಎಂದರು.
ತೆರದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶರಣರಾದ ಈರಣ್ಣ ಗುಣಕಿ, ಶ್ರೀಶೈಲ ಬಯ್ಯಾರ, ರಾಜು ಸಾಬೋಜಿ, ಪ್ರಭು ಉಮದಿ, ಈಶ್ವರ ನಾಗರಾಳ, ಬಸವರಾಜ ಮದರಕಂಡಿ, ಡಾ.ಎಂ.ಎಸ್. ಹತಪಾಕಿ, ಮನೋಹರ್ ಮಣಜಿಗಿ, ಗಂಗಾಧರ ಬೆಳವಡಿ, ನೀಲಕಂಠ ಮುತ್ತೂರು, ಬಾಬು ಮಹಾಜನ, ಗಿರೀಶ ಮುತ್ತೂರ, ಕಿರಣ ಬುಳಿಮಿಸಿ, ಸಾಗರ ನಿಪ್ಪಾಣಿ, ವಿಜಯ ನಾಶಿ, ಗೌರಿಹರ ಮುತ್ತೂರ, ಶ್ರೀಶೈಲ ಗುಣಕಿ, ಶಿವಾನಂದ ಸಿಂದಗಿ, ರಾಮಣ್ಣ ಹುಲಕುಂದ, ಮಹದೇವಪ್ಪ ಮುತ್ತೂರ, ಚಿದಾನಂದ ಪಾಗದ, ಈರಣ್ಣ ಅಂಗಡಿ, ಸದಾಶಿವ ಮಟ್ಟಿಕಲಿ, ಮಲ್ಲಿಕಾರ್ಜುನ ಸಾಬೂಜಿ, ಈರಣ್ಣ ಗುಗ್ರಿ, ಸಂಗಯ್ಯ ಅಮ್ಮನಗಿ, ಬಾಬು ಗಂಗಾವತಿ, ಅಶೋಕ ಕೋತಿನ ಹಾಗೂ ನೂರಾರು ಮಹಿಳೆಯರು, ವಿವಿಧ ಸಂಘ-ಸಂಸ್ಥೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.