ಕನ್ನಡಪ್ರಭ ವಾರ್ತೆ ಮೇಲುಕೋಟೆ
ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ನಾಗರಿಕರು ಸಲಹೆ ನೀಡಿ, ಪ್ರವಾಸಿ ತಾಣ ಮೇಲುಕೋಟೆಗೆ ನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಮುಂಭಾಗದಲ್ಲಿ ಚರಂಡಿ ದುರಸ್ತಿ ಮಾಡಬೇಕು, ಅಂಗಡಿ ಮುಂಗಟ್ಟುಗಳಿಂದ ಸ್ವಚ್ಛತಾ ಶುಲ್ಕ ಪಡೆಯಬೇಕು, ಕೋಳಿಮಾಂಸದ ಅಂಗಡಿಗಳನ್ನು ನಿಯಂತ್ರಿಸಬೇಕು ಎಂಬ ಹಲವು ಸಲಹೆಗಳನ್ನು ನೀಡಿದರು.
ಹಿಂದಿನ ಗ್ರಾಮಸಭೆಯಲ್ಲಿನ ನಿರ್ಣಯಗಳನ್ನು ಆದ್ಯತೆ ಮೇಲೆ ಅನುಷ್ಠಾನ ಮಾಡಬೇಕು, ಮೀನುಸಾಕಣೆ, ಕೆರೆ- ಕಟ್ಟೆ, ಕೊಳಗಳನ್ನು ಹರಾಜು ಮಾಡಬೇಕು. ಸರ್ಕಾರಿ ಬಾಲಕರ ಶಾಲೆಯಲ್ಲಿ 2021ರ ಶಿಕ್ಷಣ ಇಲಾಖೆ ಗ್ರಾಪಂ ಸಹಯಗೋಗದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಉಪಯೋಗಕ್ಕೆ ಶಾಲೆಗೆ ಹಸ್ತಾಂತರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸ್ವಚ್ಛತೆ ಕಾಪಾಡಬೇಕು. ಪಾರ್ಕಿಂಗ್ಗೆ ವ್ಯವಸ್ಥಿತ ಜಾಗ ಕಲ್ಪಿಸುವಂತೆ ಮನವಿಗಳು ಕೇಳಿಬಂದವು.ಬಡವರಿಗೆ ಮನೆ ನಿರ್ಮಾಣದ ಗ್ರ್ಯಾಂಟ್ ನೀಡುವ ವಿಚಾರದಲ್ಲಿ ಚರ್ಚಿಸಿದ ಗ್ರಾಮಸಭೆ ಬಸವ ವಸತಿ ಯೋಜನೆ ಮತ್ತು ಪ್ರದಾನ ಮಂತ್ರಿ ಅವಾಜ್ ಯೋಜನೆಯಡಿ 6 ಮಂದಿ ಬಡ ಫಲಾನುಭವಿಗಳನ್ನು ಆಯ್ಕೆಮಾಡಿ ಮನೆ ನಿರ್ಮಾಣಕ್ಕೆ ಅನುದಾನ ನೀಡಬಹುದು ಎಂದು ತೀರ್ಮಾನಿಸಿತು.
ಶಾಸಕರಿಗೆ ಪ್ರಸ್ತಾವನೆ:
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಣಿ ಮುರುಗನ್ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ, ಕುಡಿಯುವ ನೀರು ನೈರ್ಮಲ್ಯ ಯೋಜನೆ ಇಂಜಿನಿಯರ್ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷ ಜಿ.ಕೆ.ಕುಮಾರ್, ಸದಸ್ಯರಾದ ಸೋಮಶೇಖರ್ ಜಯರಾಮೇಗೌಡ, ಲಕ್ಷ್ಮಮ್ಮ, ಭಾಗ್ಯಮ್ಮ ರಾಜೇಶ್ವರಿ, ರೇಷ್ಮೇ ಇಲಾಖೆ ಪುಟ್ಟಸ್ವಾಮಿಗೌಡ, ಸಮಾಜಕಲ್ಯಾಣ ಇಲಾಖೆ ಪ್ರಸನ್ನಕುಮಾರ್, ಸಾಮಾಜಿಕ ಅರಣ್ಯ ಯೋಜನೆಯ ಯೋಗೇಗೌಡ, ಬಾಲಕರ ಶಾಲೆ ಮುಖ್ಯಶಿಕ್ಷಕರಾದ ಸಂತಾನರಾಮನ್, ಮಂಜುನಾಥ್ , ಆರೋಗ್ಯ ಇಲಾಖೆಯ ಉಮಾ ದೇವಮ್ಮ, ಸಂಜೀವಿನಿ ಒಕ್ಕೂಟದ ಕವಿತ, ಸವಿತ ಭಾಗವಹಿಸಿದ್ದರು.