- ಗೆದ್ಲೆಹಳ್ಳಿಯ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಗದಿಯತ್ ಕಾವಲಿನ ಕೈಗಾರಿಕಾ ವಲಯ ವೀಕ್ಷಣೆ
ಕನ್ನಡಪ್ರಭ ವಾರ್ತೆ, ಕಡೂರುಬಯಲು ಪ್ರದೇಶವಾದ ಕಡೂರು ತಾಲೂಕಿನಲ್ಲಿ ಸಾವಿರಾರು ಯುಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕೆ ಗಳನ್ನು ತೆರೆಯಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್ .ಆನಂದ್ ಹೇಳಿದರು.
ಬುಧವಾರ ಕ್ಷೇತ್ರದ ಗೆದ್ಲೆಹಳ್ಳಿ ಸಮೀಪದ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಗದಿಯತ್ ಕಾವಲಿನಲ್ಲಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ ಆರಂಭವಾಗುತ್ತಿರುವ ಕೈಗಾರಿಕಾ ವಲಯದಲ್ಲಿ ಕೆಐಎಡಿಬಿ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಮೂಲಭೂತ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕಡೂರು ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದ ಕಾರಣ ತಾಲೂಕಿನ ಗ್ರಾಮೀಣ ಯುವಕರು ಕೆಲಸವಿಲ್ಲದೆ ಅನಿವಾರ್ಯವಾಗಿ ಬೆಂಗಳೂರಿನಂತಹ ನಗರಗಳಿಗೆ ಹೋಗುವ ಪರಿಸ್ಥಿತಿ ಇದೆ. ಸ್ಥಳೀಯವಾಗಿಯೇ ನಮ್ಮ ಯುವಕರಿಗೆ ಉದ್ಯೋಗ ಸಿಗುವಂತೆ ಕ್ರಮ ವಹಿಸುತ್ತಿದ್ದೇನೆ ಎಂದರು.
ಈಗಾಗಲೇ ನಗದೀಯತ್ ಕಾವಲಿನಲ್ಲಿ 236 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅತ್ಯುತ್ತಮ ರಸ್ತೆ, ಚರಂಡಿ, ಬ್ಲಾಕ್ ಗಳ ರಚನೆ ಕಾರ್ಯ ಪ್ರಗತಿಯಲ್ಲಿದ್ದು ಶೇ 10 ರಷ್ಟು ಕಾಮಗಾರಿ ಬಾಕಿ ಇದೆ. ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಇಂಜಿನಿಯರ್ ಜೊತೆ ಚರ್ಚಿಸಿದ್ದು, ನಿಡಘಟ್ಟ ಎಂವಿಎಸ್ಎಸ್ ನಿಂದ 20 ಕೋಟಿ ರು. ವೆಚ್ಚದ ವಿದ್ಯುತ್ ಘಟಕ ನಿರ್ಮಾಣದಕ್ಕೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಎಂವಿಎಸ್ಎಸ್ ಘಟಕ ಆರಂಭವಾದರೆ ಕೈಗಾರಿಕೆ ಗಳು ಮತ್ತು ಬೀದಿ ದೀಪಗಳಿಗೂ ಅನುಕೂಲವಾಗಲಿದೆ ಎಂದರು.ಈಗಾಗಲೇ 15 ಲಕ್ಷ ಲೀ. ಸಾಮರ್ಥ್ಯದ ಕುಡಿವ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದು. ಈಗ 200 ಬ್ಲಾಕ್ ಗಳ ನಿರ್ಮಾಣ, ಕನಿಷ್ಠ 1/2 ಎಕರೆಯಿಂದ ಗರಿಷ್ಠ 10 ಎಕರೆವರೆಗೂ ನಿರ್ಮಾಣ ಕಾರ್ಯ ನಡೆದಿದೆ. ಉದ್ಯಮಿಗಳು ತಾವು ನಡೆಸುವ ಕೈಗಾರಿಕೆ ಗಳಿಗೆ ಬೇಕಾದ ವಿಸ್ತ್ರೀರ್ಣದ ಬ್ಲಾಕ್ಗಳನ್ನು ಖರೀದಿಸಲು ಇದೇ ಜ. 18 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಈಗಾಗಲೇ ಅನೇಕ ಅರ್ಜಿಗಳು ಬಂದಿದ್ದು ,1 ಎಕರೆಗೆ 53 ಲಕ್ಷ ರು. ನಿಗದಿ ಪಡಿಸಲಾಗಿದೆ. ಇದರಲ್ಲಿ ಸಾಮಿಲ್ ಮಾಲೀಕರು ಅರ್ಜಿ ಸಲ್ಲಿಸಿದ್ದು ಅವರಿಗೆ ಪ್ರತ್ಯೇಕ ಬ್ಲಾಕ್ ನೀಡುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಕೈಗಾರಿಕಾ ವಲಯ ಅತ್ಯಂತ ಆಧುನಿಕ ವಿನ್ಯಾಸದಲ್ಲಿ ರೂಪುಗೊಂಡಿದೆ. ಕೂಡಲೆ ಬಂದ ಅರ್ಜಿಗಳನ್ನು ಪರಿಗಣಿಸಿ ಬ್ಲಾಕ್ ಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಹಾಸನ ಕೆಐಎಡಿಬಿ ಮುಖ್ಯ ಇಂಜಿನಿಯರ್ ಸುನೀಲ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಚಿಕ್ಕಮಗಳೂರಿನ ಜಂಟಿ ನಿರ್ದೇಶಕ ಸಿದ್ದರಾಜ್, ಹಾಸನದ ಇಂಜಿನಿಯರ್ ಜೋಷಿ, ಹರೀಶ್, ಜವಳಿ ಇಲಾಖೆ ಆಶೋಕ್, ಚಿಕ್ಕಮಗಳೂರಿನ ಉಪ ನಿರ್ದೇಶಕ ರವಿಪ್ರಸಾದ್, ಮಂಗಳೂರಿನ ರಾಘವೇಂದ್ರ ಹಾಗು ಗುತ್ತಿಗೆದಾರ ಚೌಳ ಹಿರಿಯೂರು ಹಾಲಪ್ಪ ಮುಖಂಡ ಶ್ರೀಕಂಠ ವಡೆಯರ್ ಸೇರಿದಂತೆ ಮತ್ತಿತರರು ಇದ್ದರು. --- ಬಾಕ್ಸ್ ----ಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಕೈಗಾರಿಕಾ ಪ್ರದೇಶ ಅತ್ಯಂತ ವೇಗವಾಗಿ ಬೆಳೆಯಲಿದೆ. ಒಂದೆರೆಡು ಗಾರ್ಮೆಂಟ್ ಗಳು ಆರಂಭವಾದಲ್ಲಿ ನಮ್ಮ ತಾಲೂಕಿನ ಸಾವಿರಾರು ಮಹಿಳೆಯರಿಗೆ, ಜೊತೆಯಲ್ಲಿ ನಿರುದ್ಯೋಗಿ ಯುವಕರಿಗೂ ಉದ್ಯೋಗ ಸಿಗಲಿದೆ. ಕಡೂರು ಪಟ್ಟಣದ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬೇಕಾದ ಸೌಲಭ್ಯ ನೀಡಲು ತಾವು ಸಿದ್ಧ.
- ಕೆ.ಎಸ್.ಆನಂದ್, ಶಾಸಕ.10ಕೆಕೆಡಿಯು1.1ಎ
ಕಡೂರು ಸಮೀಪದ ಕೈಗಾರಿಕಾ ಪ್ರದೇಶದ ನಗದಿಯತ್ ಕಾವಲಿನಲ್ಲಿ ನಿರ್ಮಿಸಲಾಗುತ್ತಿರುವ ಕೈಗಾರಿಕಾ ಕಾರಿಡಾರಿನ ಮೂಲ ಸೌಲಭ್ಯಗಳನ್ನು ಶಾಸಕ ಕೆ.ಎಸ್.ಆನಂದ್ ವೀಕ್ಷಿಸಿದರು. ಇಂಜಿನಿಯರ್ಸ್ ಇದ್ದರು.10ಕೆಕೆಡಿಯು1ಎ.
ಕೈಗಾರಿಕಾ ವಲಯದ ಅಭಿವೃದ್ಧಿ ಕುರಿತು ಅಧಿಕಾರಿಗಳು ಶಾಸಕ ಕೆ ಎಸ್ ಆನಂದ್ ರವರಿಗೆ ನಕ್ಷೆ ತೋರಿಸಿ ಮಾಹಿತಿ ನೀಡಿದರು.