ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನೆಲದಾಂಜನೇಯಸ್ವಾಮಿಗೆ ಕನ್ನಡದ ಬಾವುಟದ ವಿಶೇಷ ಅಲಂಕಾರ ಮಾಡಿಸಲಾಗಿತ್ತು. ಡಾ.ರಾಜ್ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಆಗಿರಬೇಕು, ಕನ್ನಡ ಶಾಲೆಗಳನ್ನು ಅಭಿವೃದ್ಧಿ ಮಾಡುವ ಕಡೆಗೆ ಹೆಚ್ಚಿನ ಗಮನ ಅಗತ್ಯ. ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಅವಶ್ಯವಾಗಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ತಿಳಿಸಿದರು.ಕಜಾವೇ ರಾಜ್ಯಾಧ್ಯಕ್ಷ ಮಂಜುನಾಥ ದೇವಾ ಮಾತನಾಡಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಜಾವೇ ಜಿಲ್ಲಾಧ್ಯಕ್ಷ ನಾಗರಾಜು ಸಂಕಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್, ತಾಲೂಕು ಅಧ್ಯಕ್ಷ ಶಶಿಧರ್ ಸಿ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಕಾರ್ಯಾಧ್ಯಕ್ಷ ಶಿವಪ್ರಸಾದ್, ಕಜಾಪ ಟ್ರಸ್ಟಿ ಬಿ.ಜಿ.ಅಮರನಾಥ್, ಮಾನವ ಹಕ್ಕುಗಳ ಸಂಘಟನೆಯ ಜಯರಾಮಯ್ಯ, ವೈದ್ಯಾಧಿಕಾರಿ ಡಾ. ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ಕಸಾಪ ಸುರೇಶ್, ದೇವಾಂಗ ಮಂಡಲಿಯ ಪ್ರಿಯಾಂಕ, ಗ್ರಾಪಂ ಸದಸ್ಯೆ ನಾಗರತ್ನಮ್ಮ, ಕನ್ನಡಪಕ್ಷದ ಸಂಜೀವನಾಯಕ್, ಪತ್ರಕರ್ತ ರಾಜು ಸಣ್ಣಕ್ಕಿ ಭಾಗವಹಿಸಿದ್ದರು.